
ಬೆಂಗಳೂರು (ಫೆ. 22): ಕಾಟನ್’ಪೇಟೆ ಪೇದೆಗೆ ಥಳಿಸಿ ಗನ್ ಕದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆಗಾಗಿ ಪೇದೆ ಪುರುಷೋತ್ತಮ್ ಮನೆಯಲ್ಲಿ ಸರ್ಚ್ ಮಾಡ್ತಿದ್ದಾಗ ಪೊಲೀಸರಿಗೆ ಶಾಕ್ ಆಗಿದೆ.
ಈಗ ಪೇದೆ ಪುರೋಷತ್ತಮ್ ಮನೆಯಲ್ಲಿಯೇ 1996ರಲ್ಲಿ ಕಳ್ಳತನವಾಗಿದ್ದ ಡಿಪಾರ್ಟ್’ಮೆಂಟ್ ಗನ್ ಸಿಕ್ಕಿದೆ. ಇದೀಗ ಗನ್ ವಶಪಡಿಸಿಕೊಂಡಿರುವ ಪೊಲೀಸರು, ಪೇದೆ ಪುರುಷೋತ್ತಮ್’ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
ಫೆ.17ರಂದು ಪರಿಷತ್ ಸದಸ್ಯ ಮನೋಹರ್ ಗನ್’ಮ್ಯಾನ್ ಆಗಿರುವ ಪುರುಷೋತ್ತಮ್ ಮೇಲೆ ಹಲ್ಲೆ ನಡೆಸಿ ಮೂವರು ಯುವಕರು ಅವರ ಬಳಿಯಿದ್ದ ಗನ್ ಕದ್ದೊಯ್ದಿದ್ದರು.
ವಿನಾಯಕ ಥಿಯೇಟರ್ ಬಳಿ ಇರುವ ಗಣೇಶನ ದೇವಸ್ಥಾನ ಬಳಿ ಈ ಘಟನೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.