
ಕೊಪ್ಪಳ(ಫೆ.22): ಕೊಪ್ಪಳದಲ್ಲಿ ಮಂಗವೊಂದು 15 ದಿನದಲ್ಲಿ 7 ಕ್ಷೌರದ ಅಂಡಗಿಗಳ ಮೇಲೆ ದಾಳಿ ನಡೆಸಿರುವ ಘಟನೆಯೊಂದು ನಡೆದಿದೆ.
ನಗರದ ಶಾರದಾ ಟಾಕೀಜ್ ಬಳಿಯಲ್ಲಿರುವ ವಿವಿಧ 7 ಕ್ಷೌರದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದು, ಕನ್ನಡಿ ಸೇರಿದಂತೆ ವಿವಿಧ ಪಿಠೋಪಕರಣಗಳನ್ನು ಹಾಳು ಮಾಡಿದೆ. ಅಷ್ಟೇ ಅಲ್ಲ ಮಂಗವನ್ನು ಓಡಿಸಲು ಹೋದ ಕ್ಷೌರದಂಗಡಿಯ ಮಾಲೀಕರ ಮೇಲೂ ದಾಳಿ ನಡೆಸಿ ಗಾಯಗೊಳಿಸಿದೆ.
ಮಂಗನ ಉಪಟಳದ ಬಗ್ಗೆ ಕ್ಷೌರದ ಅಂಡಗಿಯವರಯ ನಗರಸಭೆಗೆ ದೂರು ನೀಡಿದಾಗ ಮಂಗವನ್ನು ಸೆರೆ ಹಿಡಿದಿದ್ದರು. ಆದರೆ ಆ ಮಂಗ ಮತ್ತೆ ಬಂದಿದ್ದು, ಅಂಗಡಿಗಳ ಮೇಲೆ ದಾಳಿ ಮಾಡುತ್ತಿದೆ. ಹೀಗಾಗಿ ಮಂಗದಿಂದ ಕ್ಷೌರದ ಅಂಗಡಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ಶೀಘ್ರವೇ ಮಂಗವನ್ನು ಹಿಡಿಯಬೇಕೆಂದು ಅಂಗಡಿ ಮಾಲೀಕರು ನಗರಸಭೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.