
ವಡೋದರಾ(ಸೆ. 27): ಉರಿ ಸೇನಾ ನೆಲೆಯ ಮೇಲೆ ಪಾಕ್ ಪ್ರಚೋದಿತ ಉಗ್ರಗಾಮಿಗಳ ದಾಳಿಯನ್ನು ಪ್ರತಿಭಟಿಸಿ ಇಲ್ಲಿಯ ಕೆಲ ಮುಸ್ಲಿಂ ವ್ಯಾಪಾರಿಗಳು ಪಾಕಿಸ್ತಾನದಿಂದ ಆಮದಾದ ಪದಾರ್ಥಗಳನ್ನು ಬಹಿಷ್ಕರಿಸಿದ್ದಾರೆ. ಮುಸ್ಲಿಮ್ ಟ್ರೇಡರ್ಸ್ ಅಸೋಷಿಯೇಷನ್ ಸಂಸ್ಥೆಯ ಸದಸ್ಯರು ನಿನ್ನೆ ವಡೋದರಾದ ರಸ್ತೆಗಿಳಿದು ಪಾಕ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೇ, ಪಾಕಿಸ್ತಾನದಲ್ಲಿ ತಯಾರಾದ ಉತ್ಪನ್ನಗಳನ್ನು ಸುಟ್ಟುಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮೇಡ್ ಇನ್ ಪಾಕಿಸ್ತಾನದ ಪದಾರ್ಥಗಳನ್ನು ಬಹಿಷ್ಕರಿಸುವಂತೆ ಬೇರೆ ವ್ಯಾಪಾರಿಗಳಿಗೂ ಕರೆ ನೀಡಿದರು. ಅಲ್ಲದೇ, ಭಾರತದಾದ್ಯಂತ ಪಾಕ್ ಆಮದಿತ ಉತ್ಪನ್ನಗಳನ್ನು ನಿಷೇಧಿಸುವ ಮೂಲಕ ಶತ್ರು ದೇಶದ ಆರ್ಥಿಕತೆಗೆ ಹೊಡೆತ ಕೊಡಿ ಎಂದು ಕೇಂದ್ರ ಸರಕಾರವನ್ನೂ ಈ ಮುಸ್ಲಿಮ್ ವ್ಯಾಪಾರಿಗಳು ಒತ್ತಾಯಿಸಿದರು.
ಪಾಕಿಸ್ತಾನದಿಂದ ಸಂಬಾರ ಪದಾರ್ಥಗಳು, ಪರ್ಫ್ಯೂಮ್'ಗಳು, ಮಸ್ಕಾರಾ, ಗುಟ್ಕಾ, ಸೋಪು, ಬಟ್ಟೆ ಇತ್ಯಾದಿ ಉತ್ಪನ್ನಗಳು ಭಾರತಕ್ಕೆ ಆಮದಾಗುತ್ತವೆ. ಸಾಮಾನ್ಯವಾಗಿ ಇವುಗಳನ್ನು ಬಳಸುವುದು ಭಾರತೀಯ ಮುಸ್ಲಿಮರೇ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.