
ಬೆಂಗಳೂರು(ಸೆ.27): ಇವತ್ತು ಸುಪ್ರೀಂ ಕೋರ್ಟ್ ಕಾವೇರಿ ನೀರಿನ ಭವಿಷ್ಯವನ್ನು ನಿರ್ಧರಿಸಲಿದೆ. ಕಾವೇರಿ ನೀರು ಬಿಡುಗಡೆಗೆ ಸರ್ವೋಚ್ಛ ನ್ಯಾಯಾಲಯ ನೀಡಿದ್ದ ಆದೇಶ ಮರು ಪರಿಶೀಲಿಸುವಂತೆ ಕರ್ನಾಟಕ ನಿನ್ನೆಯಷ್ಟೇ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಈ ಬೆನ್ನಲ್ಲೇ ತಮಿಳುನಾಡು ತಕರಾರು ಸಹ ಸಲ್ಲಿಸಿದೆ. ಹೀಗಾಗಿ ಇವತ್ತಿನ ಕೋರ್ಟ್ ವಿಚಾರಣೆ ಮಹತ್ವ ಪಡೆದಿದ್ದು ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ. ಹಾಗಾದರೆ ಇಂದು ಸುಪ್ರೀಂ ಕೋರ್ಟ್'ನಲ್ಲಿ ಏನಾಗಬಹುದು? ರಾಜ್ಯ ಸರ್ಕಾರ ಏನು ಮಾಡಬೇಕಾಗಬಹುದು? ಈ ಕುರಿತಾದ ಡಿಟೇಲ್ಸ್
1) ಕೋರ್ಟ್ ಆದೇಶ ಪಾಲಿಸದಿರುವುದಕ್ಕೆ ನ್ಯಾಯಾಂಗ ನಿಂದನೆ. ಹೀಗಾಗಿ ಸೆಪ್ಟೆಂಬರ್ 20ರ ಆದೇಶ ಪಾಲಿಸಿ 6 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಸೂಚಿಸಬಹುದು.
2) ಕರ್ನಾಟಕದ ವಿಧಾನಮಂಡಲ ಅಧಿವೇಶನದ ಎಚ್ಚರಿಕೆಯ ನಿರ್ಣಯವನ್ನು ಒಪ್ಪುವುದು. ಕುಡಿಯುವ ನೀರಿಗೆ ಆದ್ಯತೆ ಎಂಬುವ ಅಂಶ ಪರಿಗಣಿಸುವುದು
3) ಕಾವೇರಿ ಮೇಲುಸ್ತುವಾರಿ ಸಮಿತಿ ನಿರ್ಣಯದಂತೆ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಸೂಚಿಸಬಹುದು
4) ಕೋರ್ಟ್ ಹೊರತಾಗಿ ಮೇಲುಸ್ತುವಾರಿ ಸಮಿತಿಯಲ್ಲೇ ವ್ಯಾಜ್ಯ ಬಗೆಹರಿಸುವಂತೆ ವಿಚಾರಣೆ ನಡೆಸಿ ಅರ್ಜಿ ವಜಾ ಮಾಡುವುದು
5) ಮತ್ತೊಮ್ಮೆ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪಿಸಲು ಸೂಚನೆ. ಅಲ್ಲದೆ, ಅಕ್ಟೋಬರ್ 20ರೊಳಗೆ ಈ ವಿಚಾರವಾಗಿ ದೃಢ ನಿಲುವು ತಳೆಯುವಂತೆ ಹೇಳುವುದು
ಸುಪ್ರೀಂ ಕೋರ್ಟ್ ಇಂತಹ ನಿರ್ಧಾರಗಳನ್ನು ತೆಗೆದುಕೊಂಡರೆ ಆಗ ರಾಜ್ಯಕ್ಕೆ ಏನಾಗಬಹುದು?
1) ಸುಪ್ರೀಂಕೋರ್ಟ್ ಆದೇಶ ಪಾಲಿಸಲೇಬೇಕು. 2002ರ ರೀತಿ ನೀರಿನ ಬಿಕ್ಕಟ್ಟು ನಿವಾರಣೆಗೆ ಸರ್ಕಾರ ಪ್ರಯತ್ನಿಸಬೇಕು
2) ರಾಜ್ಯದ ಈ ವಾದ ಒಪ್ಪಿದರೆ ಸರ್ಕಾರ ಜಲಗಂಡಾಂತರದಿಂದ ಪಾರು. ಆದರೆ, ತಮಿಳುನಾಡು ಮತ್ತೆ ಕಾನೂನು ಹೋರಾಟ ಮುಂದುವರಿಸುವುದು
3) ಮೇಲುಸ್ತುವಾರಿ ಸಮಿತಿ ಸಭೆಯಂತೆ ನೀರು ಬಿಡಲು ಸೂಚಿಸಿದರೆ ರಾಜ್ಯ ಸರ್ಕಾರಕ್ಕೆ ಮತ್ತೆ ಸಂಕಷ್ಟ. ನೀರು ಬಿಡಲೇಬೇಕಾದ ಅನಿವಾರ್ಯ
4) ಸುಪ್ರೀಂ ಕೋರ್ಟ್ ಸೂಚಿಸಿದ್ದೇ ಆದರೆ ಸೆಪ್ಟೆಂಬರ್ 19ರ ನಿರ್ಣಯದಂತೆ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ನಿರ್ದೇಶನ. ಆದರೂ ರಾಜ್ಯ ಸರ್ಕಾರಗಳು ಮತ್ತೆ ಸುಪ್ರೀಂ ಕದ ತಟ್ಟಬಹುದು.
5) ರಾಜ್ಯದ ಪಾಲಿಗೆ ನಿಜಕ್ಕೂ ಯುದ್ಧವೇ ಸರಿ. ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಸೋಲು ಎಂದೇ ಭಾವನೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ವೇಳೆ ರಾಜ್ಯದ ಹಿತಕ್ಕೆ ಗಮನ ಹರಿಸಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.