
ಬೆಂಗಳೂರು(ಸೆ.27): KRS ನಿಂದ ತಮಿಳುನಾಡಿಗೆ ನೀರು ಬಿಡದಿದ್ದರೂ ಮೆಟ್ಟೂರು ಡ್ಯಾಂಗೆ ನೀರು ಸೇರಿದೆ!. ನಂಬಲಸಾಧ್ಯವಾದರೂ ಇದು ನಂಬಲೇಬೇಕಾದ ಸತ್ಯ. ಅಷ್ಟಕ್ಕೂ ತಮಿಳುನಾಡಿನ ಮೆಟ್ಟೂರು ಡ್ಯಾಂಗೆ ನೀರು ಸೇರಿದ್ದು ಹೇಗೆ ಇಲ್ಲಿದೆ ವಿವರ
ಅಂದ ಹಾಗೆ ಮೆಟ್ಟೂರು ಡ್ಯಾಂಗೆ ಸೇರಿದ ನೀರು ಕೆಆರ್ಎಸ್ನಿಂದ ಹರಿದ ನೀರಲ್ಲ ಬದಲಾಗಿ ಇದು ಮಳೆಯ ಎಫೆಕ್ಟ್. KRS ಹಾಗೂ ಬಿಳುಗುಂಡ್ಲು ಮಧ್ಯೆ ಸುರಿದ ಮಳೆಯ ಪರಿಣಾಮವಾಗಿ ಕೇವಲ ಐದಾರು ದಿನಗಳಲ್ಲಿ ಮೆಟ್ಟೂರು ಡ್ಯಾಂಗೆ ಸ್ವಾಭಾವಿಕವಾಗಿಯೇ 14 ಸಾವಿರ ಕ್ಯುಸೆಕ್ ನೀರು ಸೇರಿದೆ.
-ಸೆ. 21 ರಂದು - 5 ಸಾವಿರದ 882 ಕ್ಯೂಸೆಕ್
-ಸೆ. 22 ರಂದು - 3 ಸಾವಿರದ 42 ಕ್ಯೂಸೆಕ್
-ಸೆ. 23 ರಂದು - 2 ಸಾವಿರದ 496 ಕ್ಯೂಸೆಕ್
-ಸೆ. 24 ರಂದು - ಸಾವಿರದ 590 ಕ್ಯೂಸೆಕ್
-ಸೆ. 25 ರಂದು - ಸಾವಿರದ 369 ಕ್ಯೂಸೆಕ್
-ಸೆ. 26 ರಂದು - 6 ರಿಂದ 7 ಸಾವಿರ ಕ್ಯೂಸೆಕ್
ಒಟ್ಟಾಗಿ ಕಾವೇರಿ ವಿವಾದ ನಡೆಯುತ್ತಿದ್ದ ಸಂದರ್ಭದಲ್ಲೇ ಕೆಆರ್ಎಸ್, ಬಿಳಿಗುಂಡ್ಲು ಮಧ್ಯೆ ಅನಿರೀಕ್ಷಿತವಾಗಿ ಸುರಿದ ಮಳೆಯ ಪರಿಣಾಮದಿಂದ 14 ಸಾವಿರ ಕ್ಯುಸೆಕ್ ನೀರು ತಮಿಳುನಾಡು ಪಾಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.