ಸುಂದರಿ ಕೊಲೆ ರಹಸ್ಯ ಎರಡೇ ಗಂಟೆಯಲ್ಲಿ ಬಯಲು, ರೋಚಕ ರಿಯಲ್ ಕಹಾನಿ!

Published : Oct 16, 2018, 06:44 PM ISTUpdated : Oct 16, 2018, 06:58 PM IST
ಸುಂದರಿ ಕೊಲೆ ರಹಸ್ಯ ಎರಡೇ ಗಂಟೆಯಲ್ಲಿ ಬಯಲು, ರೋಚಕ ರಿಯಲ್ ಕಹಾನಿ!

ಸಾರಾಂಶ

ಸುಂದರಿ ಸಾವಿನ ಹಿಂದಿನ ನಿಗೂಢ ರಹಸ್ಯವನ್ನು ಪೊಲೀಸರು ಪತ್ತೆಮಾಡಿದ್ದಾರೆ. ಕೇವಲ 2 ಗಂಟೆ ಅವಧಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಮಾಹಿತಿ ಕಲೆಹಾಕಿದ ಸಂಗತಿ ಯಾವ ರೋಚಕ ಸಿನಿಮಾಕ್ಕೂ ಕಡಿಮೆ ಇಲ್ಲ.

ಮುಂಬೈ[ಅ.16] ಸುಂದರಿ ಮಾಡೆಲ್ ಕೊಲೆಯ ರಹಸ್ಯವನ್ನು ಮುಂಬೈ ಪೊಲೀಸರು ಪತ್ತೆ ಮಾಡಿದ್ದು 20 ವರ್ಷದ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ.  20 ವರ್ಷದ ವಿದ್ಯಾರ್ಥಿಯೊಬ್ಬ ಮಾಡೆಲ್ ಅನ್ನು ಬರ್ಬರವಾಗಿ ಹತ್ಯೆ ಮಾಡಿ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ತೆಗೆದುಕೊಂಡು ಹೋಗಿದ್ದ ಪ್ರಕರಣ ಆತಂಕ ಮೂಡಿಸಿತ್ತು.

20 ವರ್ಷದ ಮಾನ್ಸಿ ದೀಕ್ಷಿತ್  ಕೊಲೆಯಾಗಿದ್ದಳು. 20 ವರ್ಷದ ವಿದ್ಯಾರ್ಥಿ ಮುಜಾಮಿಲ್ ಸೈಯಿದ್ ಮಾಡೆಲ್ ಹತ್ಯೆ ಮಾಡಿ ಅಂಧೇರಿಯಿಂದ ಮಲಾಡ್ ಗೆ ಶವವನ್ನು ಸೂಟ್ ಕೇಸ್ ನಲ್ಲಿ ತೆಗೆದುಕೊಂಡು ಹೋಗಿ ಬಿಸಾಕಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ವಿಶ್ವದ ನಿಗೂಢ ಕೊಲೆ ಪ್ರಕರಣವಿದು; 130 ವರ್ಷವಾದರೂ ಸಿಕ್ಕಿಲ್ಲ ಕೊಲೆಗಾರ

ರಾಜಸ್ತಾನದ ಮಾನ್ಸಿ ದೀಕ್ಷಿತ್ ಮಾಡೆಲ್ ಆಗಬೇಕೆಂದು ಮುಂಬೈಗೆ ಬಂದಿದ್ದಳು. ಈ ಮಧ್ಯೆ ಫೇಸ್ ಬುಕ್ ನಲ್ಲಿ ಮಾನ್ಸಿ ದೀಕ್ಷಿತ್ ಹಾಗೂ ಸೈಯಿದ್ ಪರಿಚಯವಾಗಿದೆ. ಸೋಮವಾರ ಮಧ್ಯಾಹ್ನ ಅಂಧೇರಿಯಲ್ಲಿ ಸೈಯಿದ್ ವಾಸವಿರುವ ಅಪಾರ್ಟ್ ಮೆಂಟ್ ನಲ್ಲಿ ಭೇಟಿಯಾಗಿದ್ದಾಳೆ. ಈ ವೇಳೆ ಇಬ್ಬರ ಮಧ್ಯೆ ಜಗಳ ನಡೆದು ಸೈಯಿದ್ ಕೈಗೆ ಸಿಕ್ಕ ವಸ್ತುವಿನಿಂದ ಹಲ್ಲೆ ಮಾಡಿದ್ದಾನೆ.  ಗಾಯಗೊಂಡಿದ್ದ ಮಾನ್ಸಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ. ಇದರಿಂದ ಗಾಬರಿಗೊಂಡ ಸೈಯಿದ್ ಕ್ಯಾಬ್ ನಲ್ಲಿ ಅಂಧೇರಿಯಿಂದ ಮಲಾಡ್ ಗೆ ಸೂಟ್‌ಕೇಸ್‌ನಲ್ಲಿ ಶವವನ್ನು ಸಾಗಿಸಿದ್ದಾನೆ.

ನಂತರ ಮಲಾಡ್ ನ ನಿರ್ಜನ ಪ್ರದೇಶದಲ್ಲಿ ಶವ ಬಿಸಾಡಿ ಆಟೋ ರಿಕ್ಷಾದಲ್ಲಿ ಸೈಯಿದ್ ಹೊರಟಿದ್ದನ್ನು ಗಮನಿಸಿದ ಕ್ಯಾಬ್ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.  ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಸೂಟ್‌ಕೇಸ್‌ ತೆರೆದು ನೋಡಿದಾಗ ಮಾಡೆಲ್ ಶವ ಪತ್ತೆಯಾಗಿತ್ತು.

ತನಿಖೆ ನಡೆಸಿದ ಪೊಲೀಸರು ಮೊದಲು ವ್ಯಕ್ತಿ ಬಂದಿಳಿದ ಆಟೋ ನಂಬರ್ ಪತ್ತೆ ಮಾಡಿದ್ದಾರೆ. ಇದಾದ ಮೇಲೆ ಆಟೋ ಸಂಚರಿಸಿದ ಮಾರ್ಗದ ಸಿಸಿಟಿವಿ ಚಲನ ವಲನ ನೋಡೊದ್ದಾರೆ. ವ್ಯಕ್ತಿ ಒಂದು ಕಡೆ ಆಟೋದಿಂದ ಕ್ಯಾಬ್ ಗೆ ಶಿಫ್ಟ್ ಆಗಿದ್ದಾನೆ. ಆ ಮಾಹಿತಿಯನ್ನು ಪಡೆದುಕೊಂಡ ಪೊಲೀಸರು ಕೇವಲ 2 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು