ಯಡಿಯೂರಪ್ಪನವರ 3 ಗಂಟೆ 'ಅಲ್ಲೋಲ ಕಲ್ಲೋಲ' ಭವಿಷ್ಯ ಏನಾಯ್ತು..?

By Web DeskFirst Published Oct 16, 2018, 6:25 PM IST
Highlights

ಯಡಿಯೂರಪ್ಪನವರ ಮಂಗಳವಾರ ಮಧ್ಯಾಹ್ನ 3 ಗಂಟೆ 'ಅಲ್ಲೋಲ ಕಲ್ಲೋಲ' ಭವಿಷ್ಯ ಏನಾಯ್ತು..? ಅದ್ಯಾವ ರಾಜಕೀಯ ಬಾಂಬ್ ಸಿಡಿಯಿತು? ಬಿಎಸ್‍ವೈ ಭವಿಷ್ಯದ ಸೀಕ್ರೆಟ್ ಔಟ್ ಏನಾಯ್ತು..? ಇದಕ್ಕೆ ಯಡಿಯೂರಪ್ಪ ಏನಂದ್ರು? ಇಲ್ಲಿದೆ ನೋಡಿ.

ಮಂಡ್ಯ, [ಅ.16]: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಶಾಕ್ ಕೋಡ್ತೀನಿ ಅಂದಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಯುಟರ್ನ್ ಹೊಡೆದಿದ್ದಾರೆ.

ನೋಡ್ತೀರಿ ಮಂಗಳವಾರ ಮಧ್ಯಾಹ್ನ ಮೂರು ಗಂಟೆಗೆ ಕಾಂಗ್ರೆಸ್ ಗೆ ದೊಡ್ಡ ಶಾಕ್ ಕೊಡುತ್ತೇನೆ. ಸರ್ಕಾರದಲ್ಲಿ ಏರುಪೇರಾಗಿ, ಭಾರಿ ಅಲ್ಲೋಲ ಕಲ್ಲೋಲವಾಗಲಿದೆ ಎಂದು ಮೊನ್ನೇ ಅಷ್ಟೇ ಶಿವಮೊಗ್ಗದಲ್ಲಿ ಯಡಿಯೂರಪ್ಪ ಹೇಳಿದ್ದರು. ಬಿಎಸ್ವೈ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲವನ್ನೇ ಹುಟ್ಟು ಹಾಕಿತ್ತು. ಅದೆಲ್ಲ ಇದೀಗ ಠುಸ್ ಪಟಾಕಿಯಾಗಿದೆ.

‘ಇಂದು 3 ಗಂಟೆ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ’

 ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಶಾಕಿಂಗ್ ನ್ಯೂಸ್ ಕೊಡುತ್ತೇನೆ ಎಂದು ಯಾರು ಹೇಳಿದ್ದಾರೋ ಗೊತ್ತಿಲ್ಲ ಎಂದು ಬಿಎಸ್‌ವೈ ಕೈತೊಳೆದುಕೊಂಡಿದ್ದಾರೆ. ಈ ರೀತಿ ಮಡುವುದು ಇದೆ ಮೊದಲಲ್ಲ ಈ ಹಿಂದೆಯೂ ಶಾಕಿಂಗ್ ನ್ಯೂಸ್ ಕೋಡ್ತೀನಿ ಅಂತೆಲ್ಲಾ ಹೇಳಿಕೊಂಡಿದ್ದರು. 

ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮಾರ್ಚ್ 16 ರಂದು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ, ಎಚ್‍ಡಿಡಿ ಕುಟುಂಬದ ಹಗರಣ ಬಯಲು ಮಾಡುವುದಾಗಿ ಬಿಎಸ್‍ವೈ ಸ್ಫೋಟಕ ಹೇಳಿಕೆ ನೀಡಿ ಸಂಜೆ 4 ಗಂಟೆಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದರು. 

ಆದರೆ, ಅಂದು ತುರ್ತು ಸುದ್ದಿಗೋಷ್ಠಿ ನಡೆಸಿ ಹಳೆ ಪ್ರಕರಣವೊಂದರ ದಾಖಲೆ ನೀಡಿದ್ದರು. ಇದಕ್ಕೂ ಮುನ್ನ ತಮ್ಮ ಟ್ವಿಟ್ಟರ್ ನಲ್ಲಿ ರಾಜ್ಯ ರಾಜಕೀಯದ ಕುರಿತು ವಿಶೇಷ ಮಾಹಿತಿ ಬಹಿರಂಗ ಮಾಡುವುದಾಗಿ ವಿಡಿಯೋ ಟ್ವೀಟ್ ಮಾಡಿ ಪ್ರಚಾರ ಪಡೆದಿದ್ದರು. ಅದೂ ಸಹ ಠುಸ್ ಆಗಿತ್ತು.

click me!