ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಲು ಶ್ರೀರಾಮುಲು ಚಿಂತನೆ?

By Suvarna Web DeskFirst Published Jan 30, 2018, 1:30 PM IST
Highlights

ವಿಧಾನಭಾ ಚುನಾವಣೆಗೆ ಸ್ಪರ್ಧಿಸಲು ರಾಮುಲು ಚಿಂತನೆ ನಡೆಸಿದ್ದಾರೆ. ಸದ್ಯ ಬಳ್ಳಾರಿ ಲೋಕಸಭಾ ಸಂಸದರಾಗಿರುವ ಶ್ರೀರಾಮುಲು ಲೋಕಸಭೆಯಿಂದ ವಿಧಾನಸಭೆಯತ್ತ ಚಿತ್ತ ನೆಟ್ಟಿದ್ದಾರೆ.

ಬೆಂಗಳೂರು (ಜ. 30): ವಿಧಾನಭಾ ಚುನಾವಣೆಗೆ ಸ್ಪರ್ಧಿಸಲು ರಾಮುಲು ಚಿಂತನೆ ನಡೆಸಿದ್ದಾರೆ. ಸದ್ಯ ಬಳ್ಳಾರಿ ಲೋಕಸಭಾ ಸಂಸದರಾಗಿರುವ ಶ್ರೀರಾಮುಲು ಲೋಕಸಭೆಯಿಂದ ವಿಧಾನಸಭೆಯತ್ತ ಚಿತ್ತ ನೆಟ್ಟಿದ್ದಾರೆ.

ರಾಜಕೀಯದಲ್ಲಿ ಉತ್ತುಂಗಕ್ಕೆ ಏರಲು ದೈವತ್ವದ ಮೊರೆ ಹೋದ ಶ್ರೀ ರಾಮುಲು ಶಿವಾರಾಧನೆ ಹಾಗೂ ಲಿಂಗಪೂಜೆ ಪದ್ಧತಿ ಅನುಸರಿಸಿದ್ದಾರೆ.

ಶ್ರೀರಾಮುಲುಗೆ ಪುಟ್ಟರಾಜ ಗವಾಯಿಗಳೇ ಪ್ರೇರೇಪಣೆಯಂತೆ.  ತಾಮಸ ಗುಣ ತೊರೆದು ಸಂಸ್ಕಾರವಂತರಾಗಲು ಶಿವಾರಾಧನೆ, ಲಿಂಗಪೂಜೆ ಮೊರೆ ಹೋಗಿದ್ದಾರೆ.  ಮಾಂಸಾಹಾರವನ್ನೂ ಸಹ ತ್ಯಜಿಸಿ ಶುದ್ಧ ಸಸ್ಯಾಹಾರಿಯಾಗಿ ಪರಿವರ್ತನೆಯಾಗಿದ್ದಾರೆ. ರಾಜಕೀಯ ಉನ್ನತಿಗಾಗಿ ಈ ಕ್ರಮ ಎಂದಿದ್ದಾರೆ.

 

click me!