
ಬೆಂಗಳೂರು (ಜ. 30): ವಿಧಾನಭಾ ಚುನಾವಣೆಗೆ ಸ್ಪರ್ಧಿಸಲು ರಾಮುಲು ಚಿಂತನೆ ನಡೆಸಿದ್ದಾರೆ. ಸದ್ಯ ಬಳ್ಳಾರಿ ಲೋಕಸಭಾ ಸಂಸದರಾಗಿರುವ ಶ್ರೀರಾಮುಲು ಲೋಕಸಭೆಯಿಂದ ವಿಧಾನಸಭೆಯತ್ತ ಚಿತ್ತ ನೆಟ್ಟಿದ್ದಾರೆ.
ರಾಜಕೀಯದಲ್ಲಿ ಉತ್ತುಂಗಕ್ಕೆ ಏರಲು ದೈವತ್ವದ ಮೊರೆ ಹೋದ ಶ್ರೀ ರಾಮುಲು ಶಿವಾರಾಧನೆ ಹಾಗೂ ಲಿಂಗಪೂಜೆ ಪದ್ಧತಿ ಅನುಸರಿಸಿದ್ದಾರೆ.
ಶ್ರೀರಾಮುಲುಗೆ ಪುಟ್ಟರಾಜ ಗವಾಯಿಗಳೇ ಪ್ರೇರೇಪಣೆಯಂತೆ. ತಾಮಸ ಗುಣ ತೊರೆದು ಸಂಸ್ಕಾರವಂತರಾಗಲು ಶಿವಾರಾಧನೆ, ಲಿಂಗಪೂಜೆ ಮೊರೆ ಹೋಗಿದ್ದಾರೆ. ಮಾಂಸಾಹಾರವನ್ನೂ ಸಹ ತ್ಯಜಿಸಿ ಶುದ್ಧ ಸಸ್ಯಾಹಾರಿಯಾಗಿ ಪರಿವರ್ತನೆಯಾಗಿದ್ದಾರೆ. ರಾಜಕೀಯ ಉನ್ನತಿಗಾಗಿ ಈ ಕ್ರಮ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.