ಮಾಸ್ತಿಗುಡಿ ದುರಂತ ನಟರ ಕುಟುಂಬಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ಧನ ಸಹಾಯ

By Suvarna Web DeskFirst Published Nov 21, 2016, 1:17 PM IST
Highlights

ಬುಧವಾರ ಅಥವಾ ಗುರುವಾರ ಉದಯ್ ಹಾಗೂ ಅನಿಲ್ ಮನೆಗಳಿಗೆ ಸ್ವತಃ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ತೆರಳಿ ಪರಿಹಾರ ಹಣ ವಿತರಿಸಲಿದ್ದಾರೆ

ಬೆಂಗಳೂರು(ನ.21): ಮಾಸ್ತಿಗುಡಿ ಶೂಟಿಂಗ್ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯ ಬಳಿ ಮೃತಪಟ್ಟ ಖಳ ನಟರಾದ ಅನಿಲ್ ಹಾಗೂ ಉದಯ್ ಕುಟುಂಬಕ್ಕೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ 2 ಕುಟುಂಬಗಳಿಗೂ ತಲಾ 2 ಲಕ್ಷ ರೂ. ಧನಸಹಾಯ ಮಾಡಲಿದ್ದಾರೆ.

ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ್ ಹೇಳಿಕೆ ನೀಡಿದ್ದು, ಬುಧವಾರ ಅಥವಾ ಗುರುವಾರ ಉದಯ್ ಹಾಗೂ ಅನಿಲ್ ಮನೆಗಳಿಗೆ ಸ್ವತಃ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ತೆರಳಿ ಪರಿಹಾರ ಹಣ ವಿತರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

click me!