
ಉತ್ತರ ಪ್ರದೇಶ ( ನ.21): ಉತ್ತರ ಪ್ರದೇಶ ಚುನಾವಣೆಯನ್ನು ಉದ್ದೇಶವಾಗಿಟ್ಟುಕೊಂಡು ರಾಜಕೀಯ ಹಿತಾಸಕ್ತಿಗಾಗಿ ಎನ್ ಡಿಎ ಸರ್ಕಾರ ಹಣದ ಅಪಮೌಲ್ಯವನ್ನು(ಡಿಮೊನಿಟೈಸೇಶನ್) ಘೋಷಿಸಿದೆ ಎಂದು ಬಿಎಸ್ ಪಿ ವರಿಷ್ಟೆ ಮಾಯಾವತಿ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡುವಾಗ " ಪ್ರಧಾನಿ ಮೋದಿಯವರಿಗೆ ಗಟ್ಸ್ ಇದ್ದರೆ ಸಂಸತ್ತಿಗೆ ಬಂದು ವಿರೋಧ ಪಕ್ಷದವರನ್ನು ಎದುರಿಸಲಿ" ಎಂದು ದಿಟ್ಟತನ ತೋರಿಸಿದ್ದಾರೆ.
ನೋಟು ನಿಷೇಧದಿಂದ ತೊಂದರೆ ಅನುಭವಿಸುತ್ತಿರುವವರು ಬಡವರು ಮತ್ತು ಮಧ್ಯಮ ವರ್ಗದವರು. ಯಾವುದೇ ತಯಾರಿಯಿಲ್ಲದೇ ನೋಟು ನಿಷೇಧ ಮಾಡಿರುವುದನ್ನು ನೋಡಿದರೆ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವುದು ಸ್ಪಷ್ಟವಾಗುತ್ತದೆ. ಬಿಜೆಪಿಯವರು ತಮ್ಮ ರಾಜಕೀಯ ಹಿತದೃಷ್ಟಿಗಾಗಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಮಾಯಾವತಿ ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.