(Video)ಸಮಾಜ ಕಲ್ಯಾಣ ಸಚಿವರಿಂದ ಸೂ..ಳೆ ಮಗ ಪದ ಪ್ರಯೋಗ

By Suvarna Web DeskFirst Published Nov 13, 2017, 9:12 AM IST
Highlights

ಆಂಜನೇಯ ಬೆಂಬಲಿಗರು ಇಬ್ಬರಿಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು

ಕೊಪ್ಪಳ(ನ.13): ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರು ಮತ್ತೆ ತಮ್ಮ ನಾಲಿಗೆಯನ್ನು ಸಾರ್ವಜನಿಕವಾಗಿ ಹರಿಬಿಟ್ಟಿದ್ದಾರೆ.

ನಿನ್ನೆ ಕೊಪ್ಪಳದಲ್ಲಿ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸಚಿವ ಆಂಜನೇಯ ಹಾಗೂ ಲೋಕಸಭೆ ಮಾಜಿ ಸ್ಪೀಕರ್ ಮೀರಾಕುಮಾರ್ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದರು. ಆಂಜನೇಯ ಬೆಂಬಲಿಗರು ಇಬ್ಬರಿಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆಯಲ್ಲಿ ಮೀರಾ ಕುಮಾರಿ ಹಾಗೂ ಬೆಂಬಲಿಗರಿಗೆ ಕಾಫಿ, ಟೀ ವ್ಯವಸ್ಥೆ ಇಲ್ಲದ್ದಕ್ಕೆ ಕೋಪಗೊಂಡ ಸಚಿವರು ಏ ಯಾವನು ಅವ ಭಟ್ಟ ಸೂ.. ಮಗ ಕಾಫಿ, ಟೀ ವ್ಯವಸ್ಥೆ ಮಾಡು ಪ್ರವಾಸಿ ಮಂದಿರದ ಸಿಬ್ಬಂದಿಯ ವಿರುದ್ಧ ಹರಿಹಾಯ್ದರು. ಸಚಿವರು ಬೈಗುಳದ ವಿಡಿಯೋ ಎಲ್ಲಡೆ ವೈರಲ್ ಆಗಿದೆ.

Latest Videos

click me!