
ತುಮಕೂರು [ಜು.5] ‘ನಾನು ಜೀವನದಲ್ಲಿ ಹಲವು ರೀತಿಯ ಕಷ್ಟ ನಷ್ಟಗಳನ್ನು ಅನುಭವಿಸಿದ್ದೇನೆ. ನೆಮ್ಮದಿ ಶಾಂತಿ ಹುಡುಕಿಕೊಂಡು ಕಾಡುಸಿದ್ದೇಶ್ವರ ಮಠಕ್ಕೆ ಬಂದಿದ್ದೇನೆ.. ಹೀಗೆಂದು ಹೇಳಿದ್ದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್.
ತಮ್ಮ ಆರಾಧ್ಯದೈವ ನೋಣವಿನಕೆರೆಯ ಕಾಡುಸಿದ್ದೇಶ್ವರ ಅಜ್ಯಯ್ಯನ ಪೀಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ನಾನು ಸಂಕಷ್ಟಬಂದಾಗ ಸಾವಿರಾರು ಕಡೆ ಹೋಗಿರಬಹುದು ಆದರೆ ಕಾಡುಸಿದ್ದೇಶ್ವರ ಮಠವೇ ನನಗೆ ಶಕ್ತಿ,ಭಕ್ತಿ ಸ್ಪೂರ್ತಿ ಎಂದರು.ಅವಮಾನಿಸಿದ ಜಾಗದಲ್ಲೇ ಬೆಳೆಯಬೇಕು, ಕಳೆದು ಕೊಂಡ ಜಾಗದಲ್ಲೆ ಹುಡುಕಬೇಕು ಎಂದು ಶ್ರೀಗಳು ಹೇಳಿದ್ದಾರೆ.
ಶ್ರೀಗಳ ಈ ನುಡಿಗೆ ನಾನು ಸಾಕ್ಷಿಯಾಗಿದ್ದೇನೆ ಎಂಥಹ ಸಮಸ್ಯೆ ಬಂದರೂನನ್ನ ಹಿಂದೆ ನಿಂತಿದ್ದು ಅಜ್ಜಯ್ಯ. ಬಜೆಟ್ ಗೂ ಹೋಗದೇ ಈ ಪವಿತ್ರ ಸ್ಥಾನಕ್ಕೆ ಬಂದಿದ್ದೇನೆ ಅಷ್ಟರ ಮಟ್ಟಿಗೆ ನಾನು ಶರಣಾಗಿದ್ದೇನೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.