ಐಎಎಸ್ ಟಾಪರ್ ಟಿನಾರಿಂದ ಮೋದಿ ಪ್ರಶಂಸೆ: ಏನೆಲ್ಲಾ ಪ್ರತಿಕ್ರಿಯೆ ಸಿಕ್ತು?

Published : Jul 05, 2018, 06:41 PM ISTUpdated : Jul 05, 2018, 07:58 PM IST
ಐಎಎಸ್ ಟಾಪರ್ ಟಿನಾರಿಂದ ಮೋದಿ ಪ್ರಶಂಸೆ: ಏನೆಲ್ಲಾ ಪ್ರತಿಕ್ರಿಯೆ ಸಿಕ್ತು?

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿದ ಐಎಎಸ್ ಟಾಪರ್ ಮೋದಿ ಜೊತೆಗಿನ ಸಂವಾದದ ಫೋಟೋ ಶೇರ್ ಮೋದಿ ಮಾತು ಸ್ಪೂರ್ತಿದಾಯಕ ಎಂದ ಟಿನಾ

ನವದೆಹಲಿ(ಜು.5): 2015ನೇ ಸಾಲಿನ ಲೋಕಸೇವಾ ಪರೀಕ್ಷೆಯ ಟಾಪರ್ ಟೀನಾ ಡಾಬಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ, ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮೀಸಲಾತಿ ಕುರಿತು ಟಿನಾ ಡಾಬಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಎನ್ನಲಾದ ಪೋಸ್ಟ್‌ನಿಂದ ಅವರು ಸುದ್ದಿಯಲ್ಲಿದ್ದರು.

ಆದರೆ ಟಿನಾ ಡಾಬಿ ಹೆಸರಲ್ಲಿ ಯಾರೋ ಫೇಕ್ ಅಕೌಂಟ್ ತೆರೆದು ಈ ಪೋಸ್ಟ್ ಮಾಡಿರುವುದು ಸಾಬೀತಾಗಿತ್ತು. ಅಲ್ಲದೇ ಟಿನಾ ಡಾಬಿ ಈ ಕುರಿತು ಸ್ಪಷ್ಟನೆ ಕೂಡ ನೀಡಿದ್ದರು. ಫೆಕ್ ಕೌಂಟ್ ಮೂಲಕ ಟಿನಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿರುವ ಕುರಿತು ಪೋಸ್ಟ್ ಮಾಡಲಾಗಿತ್ತು. ಆದರೆ ಇದು ತಮ್ಮ ಫೇಸ್‌ಬುಕ್ ಅಕೌಂಟ್ ಅಲ್ಲ ಎಂದು ಟಿನಾ ಸ್ಪಷ್ಟಪಡಿಸಿದ್ದರು.

ಆದರೆ ಈ ಬಾರಿ ಟಿನಾ ನಿಜವಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ. ಅಲ್ಲದೇ ಈ ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ನಲ್ಲಿ ಫೋಟೋ ಕೂಡ ಅಪ್ಲೋಡ್ ಮಾಡಿದ್ದಾರೆ.

ಇನ್‌ಸ್ಟಾಗ್ರಾಂ ನಲ್ಲಿ ಟಿನಾ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ. ನಿನ್ನೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಐಎಎಸ್ ಪ್ರೋಬೇಶನರಿಗಳ ಜೊತೆ ಚರ್ಚೆ ನಡೆಸಿದ್ದರು. ಟಿನಾ ಡಾಬಿ ಬ್ಯಾಚ್‌ನ ಐಎಎಸ್ ಅಭ್ಯರ್ಥಿಗಳೊಂದಿಗೆ ಮೋದಿ ಸಂವಾದ ನಡೆಸಿದ್ದರು.

ಈ ಫೋಟೋವನ್ನು ಶೇರ್ ಮಾಡಿದ್ದ ಟಿನಾ, ಪ್ರಧಾನಿ ಅವರ ಮಾತುಗಳು ನಿಜಕ್ಕೂ ಸ್ಪೂರ್ತಿದಾಯಕವಾಗಿದ್ದವು ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸದೃಢ ದೇಶ ನಿರ್ಮಾಣಕ್ಕೆ ನಾಗರಿಕ ಸೇವಾ ಅಧಿಕಾರಿಗಳು ಯಾವ ರೀತಿಯಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು ಎಂದು ಟಿನಾ ತಿಳಿಸಿದ್ದಾರೆ.

ಆದರೆ ಟಿನಾ ಅವರ ಈ ಪೋಸ್ಟ್ ಗೆ ಸಾಕಷ್ಟು ಕಮೆಂಟ್‌ಗಳು ಬಂದಿದ್ದು, ಲವ್ ಜಿಹಾದ್ ಕುರಿತು ಮೋದಿ ನಿಮಗೇನೂ ಸಲಹೆ ನೀಡಲಿಲ್ಲವೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಅವರು ಹೇಳಿದಂತೆ ಕೆಲಸ ಮಾಡಬೇಡಿ ಎಂದು ಬಿಟ್ಟಿ ಸಲಹೆ ಕೂಡ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ- ಐಎಎಸ್ ಪ್ರಥಮ ರ್ಯಾಂಕ್ ಟೀನಾ ಪತಿಯೊಂದಿಗೆ ಲುಂಗಿ ಡ್ಯಾನ್ಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ