ಗೋಮಾಂಸ ವಿವಾದ: ಮೇಘಾಲಯ ಬಿಜೆಪಿ ಮುಖಂಡ ರಾಜೀನಾಮೆ

Published : Jun 02, 2017, 02:29 PM ISTUpdated : Apr 11, 2018, 12:53 PM IST
ಗೋಮಾಂಸ ವಿವಾದ: ಮೇಘಾಲಯ ಬಿಜೆಪಿ ಮುಖಂಡ ರಾಜೀನಾಮೆ

ಸಾರಾಂಶ

ಆದರೆ ಬಿಜೆಪಿಯವರು ಹಿಂದುತ್ವ ತುರುಕಲು ಯತ್ನಿಸುತ್ತಿದ್ದಾರೆ. ಬುಡಕಟ್ಟು ಜನರಿಗೆ ತಮ್ಮದೇ ಆದ ಕಾನೂನುಗಳಿವೆ. ಗೋಮಾಂಸ ವಿಷಯ ಕೆದಕಿ ಜನರ ಭಾವನೆಗಳಿಗೆ ಬಿಜೆಪಿ ಧಕ್ಕೆ ತಂದಿದೆ: ಬಿಜೆಪಿ ಮುಖಂಡ

ನವದೆಹಲಿ: ಮೇಘಾಲಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಡಮೆ ದರಕ್ಕೆ ಗೋಮಾಂಸ ನೀಡುವುದಾಗಿ ಹೇಳಿ ವಿವಾದ ಎಬ್ಬಿಸಿದ್ದ ರಾಜ್ಯ ಬಿಜೆಪಿ ಮುಖಂಡ ಬರ್ನಾರ್ಡ್‌ ಮರಾಕ್‌ ಅವರು ಪಕ್ಷಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.

ಗಾರೋ ಗುಡ್ಡಗಾಡು ಭಾಗದ ಮುಖಂಡರಾದ ಮರಾಕ್‌ ಇತ್ತೀಚೆಗೆ ನೀಡಿದ ಹೇಳಿಕೆಯು ಪಕ್ಷದ ತತ್ವಕ್ಕೆ ವಿರುದ್ಧವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮರಾಕ್‌, ‘ನಾನು ಓರ್ವ ಕ್ರೈಸ್ತ. ನನಗೆ ಗಾರೋ ಜನರು ಮುಖ್ಯ. ಆದರೆ ಬಿಜೆಪಿಯವರು ಹಿಂದುತ್ವ ತುರುಕಲು ಯತ್ನಿಸುತ್ತಿದ್ದಾರೆ. ಬುಡಕಟ್ಟು ಜನರಿಗೆ ತಮ್ಮದೇ ಆದ ಕಾನೂನುಗಳಿವೆ. ಗೋಮಾಂಸ ವಿಷಯ ಕೆದಕಿ ಜನರ ಭಾವನೆಗಳಿಗೆ ಬಿಜೆಪಿ ಧಕ್ಕೆ ತಂದಿದೆ. ಈ ಕಾರಣಕ್ಕೆ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದ್ವೇಷ ಭಾಷಣ ನಿಷೇಧ ಕಾಯ್ದೆ ವಿರುದ್ಧ ಕೋರ್ಟ್‌ ಮೆಟ್ಟಿಲೇರುತ್ತೇವೆ: ಪ್ರಮೋದ್ ಮುತಾಲಿಕ್
ಮರ್ಯಾದೆಗೇಡು ಹ*ತ್ಯೆಗೆ ದಲಿತ ಸಂಘಟನೆಗಳ ಕಿಚ್ಚು: ಪೊಲೀಸ್‌ ಸರ್ಪಗಾವಲಿನಲ್ಲಿ ಯುವತಿ ಅಂತ್ಯಕ್ರಿಯೆ