ಕ್ಷಮಾದಾನ ಅರ್ಜಿ ಇತ್ಯರ್ಥ ಆಗುವವರೆಗೂ ಜಾಧವ್‌ ನೇಣಿಗೇರಲ್ಲ: ಪಾಕಿಸ್ತಾನ

By Suvarna Web DeskFirst Published Jun 2, 2017, 2:21 PM IST
Highlights

ಜಾಧವ್‌ಗೆ ಕ್ಷಮಾದಾನ ಅರ್ಜಿ ಸಲ್ಲಿಸುವ ಆಯ್ಕೆ ಇದ್ದು, ಅದು ಇತ್ಯರ್ಥಗೊಳ್ಳುವವರೆಗೂ ಅವರನ್ನು ನೇಣುಗಂಬಕ್ಕೇರಿಸುವುದಿಲ್ಲ ಎಂದು ಪಾಕಿಸ್ತಾನ ತಿಳಿಸಿದೆ.

ಇಸ್ಲಾಮಾಬಾದ್‌: ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಗಲ್ಲು ಶಿಕ್ಷೆಗೆ ತಡೆ ಯಾಜ್ಞೆ ನೀಡಿರುವ ಅಂತಾ ರಾಷ್ಟ್ರೀಯ ಕೋರ್ಟ್‌ ಆದೇಶವನ್ನು ಪಾಲಿಸ ಬೇಕೆಂದೇನೂ ಇಲ್ಲ ಎನ್ನುತ್ತಿದ್ದ ಪಾಕಿಸ್ತಾನ ಇದೀಗ ಹೊಸ ವರಸೆ ತೆಗೆದಿದೆ. ಜಾಧವ್‌ಗೆ ಕ್ಷಮಾದಾನ ಅರ್ಜಿ ಸಲ್ಲಿಸುವ ಆಯ್ಕೆ ಇದ್ದು, ಅದು ಇತ್ಯರ್ಥಗೊಳ್ಳುವವರೆಗೂ ಅವರನ್ನು ನೇಣುಗಂಬಕ್ಕೇರಿಸುವುದಿಲ್ಲ ಎಂದು ತಿಳಿಸಿದೆ.

click me!