ಎದ್ದು ನಿಂತರೆ ಕೂಡಲಾಗದಷ್ಟು, ಕೂತರೆ ಎದ್ದು ನಿಲ್ಲಲಾಗದಷ್ಟು ಮೈ-ಕೈ ನೋವು, ಕೀಲು ನೋವು ಸೃಷ್ಟಿಸುವ ಚಿಕೂನ್ಗುನ್ಯಾ ಕಾಯಿಲೆ ಹಾಗೂ ಮಾರಣಾಂತಿಕ ಡೆಂಘೀ ಕಾಯಿಲೆಗಳಿಗೆ ದಕ್ಷಿಣ ಭಾರತದ ಎರಡು ‘ಸಿದ್ಧ ಔಷಧಿ’ಗಳು ರಾಮಬಾಣ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.
ನವದೆಹಲಿ: ಎದ್ದು ನಿಂತರೆ ಕೂಡಲಾಗದಷ್ಟು, ಕೂತರೆ ಎದ್ದು ನಿಲ್ಲಲಾಗದಷ್ಟು ಮೈ-ಕೈ ನೋವು, ಕೀಲು ನೋವು ಸೃಷ್ಟಿಸುವ ಚಿಕೂನ್ಗುನ್ಯಾ ಕಾಯಿಲೆ ಹಾಗೂ ಮಾರಣಾಂತಿಕ ಡೆಂಘೀ ಕಾಯಿಲೆಗಳಿಗೆ ದಕ್ಷಿಣ ಭಾರತದ ಎರಡು ‘ಸಿದ್ಧ ಔಷಧಿ’ಗಳು ರಾಮಬಾಣ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.
ನವದೆಹಲಿಯ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಜೆನೆಟಿಕ್ ಎಂಜಿನಿಯರಿಂಗ್ ಆ್ಯಂಡ್ ಬಯೋಟೆಕ್ನಾಲಜಿ (ಐಸಿಜಿಇಬಿ) ಸಂಸ್ಥೆಯ ವಿಜ್ಞಾನಿಗಳು ಈ ಅಧ್ಯಯನ ನಡೆಸಿದ್ದಾರೆ. ಅಮುಕ್ಕರ ಚೂರಣಂ ಹಾಗೂ ನೀಲವೆಂಬು ಕುಡಿನೀರ್ ಎಂಬುವೇ ಈ 2 ಔಷಧಿಗಳು.
ಅಮುಕ್ಕರ ಚೂರಣಂ: ಅಮುಕ್ಕರ ಚೂರಣಂನಲ್ಲಿ ಅಶ್ವಗಂಧ ಇರುತ್ತದೆ. ಇದರಲ್ಲಿನ ಮುಖ್ಯ ಅಂಶವು ಚಿಕೂನ್ಗುನ್ಯಾ,ರಕ್ತ ಮತ್ತು ಮೆದುಳಿನ ನಡುವೆ ವೈರಸ್ ದಾಟುವುದನ್ನು ಇದು ಸಮರ್ಥವಾಗಿ ತಡೆಯಬಲ್ಲದು. ನೀಲವೆಂಬು ಕುಡಿನೀರ್: ಇದು ಚಿಕೂನ್ಗುನ್ಯಾ ವೈರಸ್ ಪ್ರವೇಶವನ್ನು ತಡೆಗಟ್ಟುತ್ತದೆ ಹಾಗೂ ಡೆಂಘೀ ವೈರಸ್ಗಳ ಪುನರವರ್ತನೆಯನ್ನು ನಿಲ್ಲಿಸುತ್ತದೆ.