ಮಸೂದ್ ಅಜರ್ ಜಾಗತಿಕ ಉಗ್ರ: ಚೀನಾ ಮೆತ್ತಗಾಗಿದ್ದು ಹೇಗೆ?

Published : May 03, 2019, 10:49 AM ISTUpdated : May 03, 2019, 11:32 AM IST
ಮಸೂದ್ ಅಜರ್ ಜಾಗತಿಕ ಉಗ್ರ: ಚೀನಾ ಮೆತ್ತಗಾಗಿದ್ದು ಹೇಗೆ?

ಸಾರಾಂಶ

ಅಜರ್‌ ವಿಷಯದಲ್ಲಿ ಚೀನಾ ಮೆತ್ತಗಾಗಿದ್ದು ಹೇಗೆ?| 10 ವರ್ಷದ ನಿಲುವು ಎರಡೇ ತಿಂಗಳಲ್ಲಿ ಬದಲು| ಇದರ ಹಿಂದಿದೆ ಭಾರತದ ರಾಜತಾಂತ್ರಿಕ ಚತುರತೆ

ನವದೆಹಲಿ[ಮೇ.03]: ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರಗಾಮಿಗಳ ಪಟ್ಟಿಗೆ ಸೇರ್ಪಡೆಗೊಳಿಸುವ ಭಾರತದ ಪ್ರಯತ್ನಕ್ಕೆ 10 ವರ್ಷಗಳಿಂದ ಕಲ್ಲುಬಂಡೆಯಂತೆ ಅಡ್ಡಿಯಾಗಿದ್ದ ಚೀನಾ ಈಗ ಮೆತ್ತಗಾಗಿದ್ದು ಹೇಗೆ?

ಕೊನೆಗೂ ಭಾರತಕ್ಕೆ ಜಯ; ಮಸೂದ್ ಅಜರ್ ಉಗ್ರ ಎಂದು ಘೋಷಿಸಿದ ವಿಶ್ವಸಂಸ್ಥೆ

ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆ ಮಾಡುವ ಕುರಿತು ವಿಶ್ವಸಂಸ್ಥೆ ನಿರ್ಧಾರ ಕೈಗೊಂಡ ಬೆನ್ನಲ್ಲೇ ಇಂತಹ ಪ್ರಶ್ನೆ ವ್ಯಾಪಕವಾಗಿ ಕೇಳಿಬರುತ್ತಿದೆ. ಚೀನಾದ ಬದಲಾದ ನಡೆ ಹಿಂದೆ ಭಾರತದ ರಾಜತಾಂತ್ರಿಕ ಒತ್ತಡ, ಚತುರತೆ ಹಾಗೂ ಅಮೆರಿಕದಂತಹ ದೇಶಗಳ ದಾಳ ಕೂಡ ಕೆಲಸ ಮಾಡಿದೆ ಎಂದು ಮೂಲಗಳು ತಿಳಿಸಿವೆ.

1. ಅಜರ್‌ನನ್ನು ಉಗ್ರ ಪಟ್ಟಿಗೆ ಸೇರಿಸುವ ವಿಚಾರದಲ್ಲಿ ಭಾರತಕ್ಕೆ ಮೊದಲ ಜಯ ಸಿಕ್ಕಿದ್ದು ಫೆ.21ರಂದು. ಕಾಶ್ಮೀರದಲ್ಲಿ ನಡೆದ ಉಗ್ರ ಕೃತ್ಯವೊಂದನ್ನು ಖಂಡಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮೊದಲ ಬಾರಿಗೆ ಹೇಳಿಕೆ ಬಿಡುಗಡೆ ಮಾಡಿತ್ತು. ಆ ಹೇಳಿಕೆಯಲ್ಲಿ ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಹೆಸರು ಪ್ರಸ್ತಾಪಿಸಿದ್ದು ಭಾರತಕ್ಕೆ ಅನುಕೂಲವೇ ಆಯಿತು. ಆ ಸಂಘಟನೆಯ ನಾಯಕನಿಗೇ ನಿಷೇಧ ಹೇರಬೇಕು ಎಂದು ತಾನು ವಾದಿಸುತ್ತಿರುವುದಾಗಿ ಅರ್ಥ ಮಾಡಿಸಲು ಭಾರತಕ್ಕೆ ಅವಕಾಶವಾಯಿತು.

ತನ್ನ ಸಾಕಿದ್ದ ಪಾಕಿಸ್ತಾನದಿಂದಲೇ ಉಗ್ರ ಮಸೂದ್ ಅಜರ್‌ಗೆ ಇದೆಂಥಾ ಶಾಕ್!

2. ಮೌಲಾನಾ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಅಮೆರಿಕ, ಬ್ರಿಟನ್‌ ಹಾಗೂ ಫ್ರಾನ್ಸ್‌ ವಿಶ್ವಸಂಸ್ಥೆಯಲ್ಲಿ ಪ್ರಸ್ತಾವ ಮಂಡಿಸಿದವು. 2017ರಲ್ಲೂ ಈ ದೇಶಗಳು ಇಂತಹುದೇ ಪ್ರಯತ್ನ ಮಾಡಿ ವಿಫಲವಾಗಿದ್ದವಾದರೂ, ಈ ಸಲ ಭಾರತಕ್ಕೆ ಹೆಚ್ಚಿನ ರಾಷ್ಟ್ರಗಳ ಬೆಂಬಲ ದೊರೆತಿದ್ದು ವರದಾನವಾಯಿತು.

3. ಅಜರ್‌ಗೆ ನಿಷೇಧ ಹೇರುವ ಪ್ರಸ್ತಾವಕ್ಕೆ ಚೀನಾ 6 ತಿಂಗಳು ತಡೆ ನೀಡಿದರೂ ಭಾರತ ಮಾತ್ರ ಆ ದೇಶವನ್ನು ಟೀಕಿಸಲಿಲ್ಲ. ಬದಲಿಗೆ ಮಾತುಕತೆ ಮುಂದುವರಿಸಿತು. ಈ ಹಂತದಲ್ಲಿ 6 ತಿಂಗಳು ಕಾಯಲು ಆಗುವುದಿಲ್ಲ ಎಂದ ಅಮೆರಿಕ, ಮತದಾನಕ್ಕೆ ಕಾರಣವಾಗುವ ಚರ್ಚೆಯಡಿ ಅಜರ್‌ ವಿರುದ್ಧ ನಿರ್ಣಯ ಮಂಡಿಸುವುದಾಗಿ ತಿಳಿಸಿತು. ಇದರಿಂದ ಚೀನಾ ಇಕ್ಕಟ್ಟಿಗೆ ಸಿಲುಕಿತು. ವಿಶ್ವಸಂಸ್ಥೆಯ ಚರ್ಚೆಯ ವೇಳೆ ಬಹಿರಂಗವಾಗಿ ಉಗ್ರನನ್ನು ಸಮರ್ಥಿಸಿಕೊಳ್ಳಬೇಕಾದ ವಿಚಿತ್ರ ಪರಿಸ್ಥಿತಿಗೆ ದೂಡಲ್ಪಟ್ಟಿತು. ಹೀಗಾಗಿ ಲಾಭ- ನಷ್ಟಅಳೆದು ತೂಗಿ ಅಜರ್‌ ವಿಷಯದಲ್ಲಿ ತನ್ನ ಹಟ ಬಿಟ್ಟಿತು ಎಂದು ಹೇಳಲಾಗಿದೆ.

ತನ್ನ ಸಾಕಿದ್ದ ಪಾಕಿಸ್ತಾನದಿಂದಲೇ ಉಗ್ರ ಮಸೂದ್ ಅಜರ್‌ಗೆ ಇದೆಂಥಾ ಶಾಕ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ