
ಮಂಗಳೂರು[ನ.16] ಅಮಿತ್ ಶಾ ಮಂಗಳೂರಿನಲ್ಲಿ ಸಭೆ ನಡೆಸಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಯಾವ ಅಸ್ತ್ರಗಳನ್ನು ಬಳಸಿಕೊಳ್ಳಬೇಕು ಎಂಬುದನ್ನು ತಿಳಿಸಿ ತೆರಳಿದ್ದಾರೆ. ಅಮಿತ್ ಶಾ ಪ್ರಕಾರ ಬಿಜೆಪಿ ಪ್ರಚಂಡ ಜಯಭೇರಿ ಬಾರಿಸುವುದರೊಂದಿಗೆ ಕೇರಳದಲ್ಲೂ ಹಕ್ಕು ಸಾಧಿಸಬೇಕು ಎಂಬುದು ಶಾ ಲೆಕ್ಕಾಚಾರ
ಅಮಿತ್ ಶಾ ಹೇಳಿರುವ ಸೂತ್ರಗಳು ಏನು?
1. ರಾಮಮಂದಿರ: ರಾಮಮಂದಿರ ನಿರ್ಮಾಣ ವಿಚಾರವನ್ನು ಜೀವಂತವಾಗಿ ಕಾಪಾಡಿಕೊಳ್ಳುವುದು. ಒಂದು ವೇಳೆ ನಿರ್ಮಾಣಕ್ಕೆ ಸಂಬಂಧಿಸಿ ಸುಗ್ರಿವಾಜ್ಞೆ ಜಾರಿಯಾದರೆ ಜನರಿಗೆ ಭಾವನಾತ್ಮಕವಾಗಿ ವಿಚಾರ ಹಂಚುವುದು.
2. ಅಯ್ಯಪ್ಪ ಸ್ವಾಮಿ ಹೋರಾಟ: ಸುಪ್ರೀಂ ಕೋರ್ಟ್ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರು ಪ್ರವೇಶ ಮಾಡಬಹುದು ಎಂದೂ ಹೇಳಿದ್ದರೂ ಪ್ರವೇಶದ ವಿರುದ್ಧವಾಗಿರುವ ಜನರು ಮತ್ತು ಮಹಿಳೆಯರನ್ನು ಸೆಳೆಯುವುದು.. ಜತೆಗೆ ಕರ್ನಾಟಕದಲ್ಲಿರುವ ಅಯ್ಯಪ್ಪ ಭಕ್ತರ ಮೇಲೆಯೂ ಪ್ರಭಾವ ಬೀರುವುದು.
3. ಯುವ ನಾಯಕರಿಗೆ ಮಣೆ: ವಿಶೇಷವಾಗಿ ಕರ್ನಾಟಕದ ಬಿಜೆಪಿಯಲ್ಲಿ ಬದಲಾವಣೆಯಾದರೂ ಅಚ್ಚರಿಇಲ್ಲ. ಒಬ್ಬರಿಗೆ ಒಂದೆ ಹುದ್ದೆ, ನಿವೃತ್ತಿ ವಯಸ್ಸು ಈ ಬಗೆಯ ವಿಚಾರ ಇಟ್ಟುಕೊಂಡು ಕರ್ನಾಟಕ ಬಿಜೆಪಿಯಲ್ಲಿ ಯುವಕರಿಗೆ ಆದ್ಯತೆ ಸಿಗಬಹುದು.
ಬಿಜೆಪಿಗೆ ಬಿಎಸ್ ವೈ ನಾಯಕತ್ವ ಬೇಕಿಲ್ಲ
4. ಸಂಘ ನಿಷ್ಠರಿಗೆ ಆದ್ಯತೆ: ಜಾತಿ,, ಕೋಮು ಆಧಾರದ ರಾಜಕಾರಣ ಬದಿಗಿಟ್ಟು ಸಂಘ ನಿಷ್ಠರಾಗಿರುವವರಿಗೆ ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಿ ರಾಜ್ಯ ಸುತ್ತಾಡುವಂತೆ ಮಾಡಬಹುದು.
5.ಗೋ ಸಾಗಾಟ ವಿಚಾರ: ಕರವಾವಳಿ ಭಾಗವನ್ನು ಗಮನದಲ್ಲಿ ಇಟ್ಟುಕೊಂಡು ಅಕ್ರಮ ಗೋ ಸಾಗಾಟಕ್ಕೆ ಬ್ರೇಕ್ ಹಾಕುವುದು ಈ ವಿಚಾರವನ್ನು ಜನರಿಗೆ ತಿಳಿಸುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.