
ತುಮಕೂರು : ಹಿರಿಯ ಕಲಾವಿದೆ ಬಿ. ಜಯಶ್ರಿ ಅವರು ತಮಗೂ ಮೀ ಟೂ ಅನುಭವವಾಗಿದ್ದಾಗಿ ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು ತಾವು ಈಗ ಈ ಬಗ್ಗೆ ಹೇಳಿಕೊಳ್ಳುತ್ತಿದ್ದೇನೆ. ನನಗೆ ನ್ಯಾಯ ಸಿಗಲಿ ಎನ್ನುವ ಉದ್ದೇಶದಿಂದ ಅಲ್ಲಾ. ನನಗಾದ ಅನ್ಯಾಯ ಇನ್ನೊಬ್ಬರಿಗೆ ಆಗದಿರಲಿ ಎಂದು ಈ ಮಾತನ್ನು ಹೇಳಿದ್ದಾಗಿ ಹೇಳಿದ್ದಾರೆ.
ನನ್ನಿಂದ ಇನ್ನೊಬ್ಬರು ಎಚ್ಚೆತ್ತುಕೊಳ್ಳಲಿ ಎಂದು ಹೇಳುತ್ತೇನೆ. ಕೆಲವೊಮ್ಮೆ ನನ್ನ ಖಾಸಗಿ ವಿಚಾರ ಯಾಕೆ ಹೇಳಲಿ ಅಂದುಕೊಳ್ಳುತ್ತೇನೆ. ನನ್ನ ಪುಸ್ತಕ ಕಣ್ಣ ಮುಚ್ಚೆ ಕಾಡೆಗೂಡೆಯಲ್ಲಿ ಎಲ್ಲವನ್ನೂ ಬರೆದಿದ್ದೆನೆ ಎಂದು ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಜನ್ಮ ಕೊಟ್ಟ ಮಗುವಿನ ತಂದೆ ಯಾರು ಎಂದು ತಾಯಿಗೆ ಮಾತ್ರ ಗೊತ್ತಾಗತ್ತದೆ. ತಂದೆಗೆ ಗೊತ್ತಾಗುವುದಿಲ್ಲ ಎಂದಿರುವ ಅವರು ಅಂತಹ ನೋವನ್ನು ಹೇಳಿದರೆ ನೀವು ನಂಬುವುದಿಲ್ಲ. ಅಂತಹ ನೋವನ್ನು ಹೇಳಿಕೊಳ್ಳುವುದು ತಪ್ಪೆಂದು ಹೇಳುವುದಿಲ್ಲ ಎಂದಿದ್ದಾರೆ.
ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಅನೇಕ ನಟಿಯರು ತಮ್ಮ ಮೀ ಟೂ ಅನುಭವವನ್ನು ಹಂಚಿಕೊಂಡಿದ್ದು ಇದೀಗ ಈ ಸಾಲಿಗೆ ಹಿರಿಯ ನಟಿ, ರಂಗಭೂಮಿ ಕಲಾವಿದೆ ಬಿ.ಜಯಶ್ರೀ ಅವರೂ ಕೂಡ ಸೇರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.