
ಟ್ರಿಪೋಲಿ(ಡಿ.23): ಲಿಬಿಯಾ ವಿಮಾನ ಹೈಜಾಕ್ ಪ್ರಕರಣ ಸುಖಾಂತ್ಯ ಕಂಡಿದೆ. ಆಂತರಿಕ ವಿಮಾನವನ್ನ ಅಪಹರಿಸಿದ್ದ ಆಗಂತುಕರು ಮಾಲ್ಟಾ ದ್ವೀಪದಲ್ಲಿ ಲ್ಯಾಂಡ್ ಮಾಡಿದ್ದರು. ಇದೀಗ, ವಿಮಾನವನ್ನ ಅಪಹರಿಸಿದ್ದ ಇಬ್ಬರೂ ಶರಣಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಅಪಹರಣಕಾರರು ಹತ್ಯೆಗೀಡಾದ ಸರ್ವಾಧಿಕಾರಿ ಗಡಾಫಿ ಬೆಂಬಲಿಗರು ಎಂದು ಹೇಳಿಕೊಂಡಿದ್ದು, ಕೈಯಲ್ಲಿ ಗ್ರನೇಡ್ ಹಿಡಿದು ತಮ್ಮ ಬೇಡಿಕೆ ಈಡೇರಿಸದಿದ್ದರೆ ಸ್ಫೋಟಿಸುವ ಬೆದರಿಕೆ ಒಡ್ಡಿದ್ದರು. ಆದರೆ, ಅಪಹೃತರು ಇಟ್ಟಿದ್ದ ಬೇಡಿಕೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಮೊದಲಿಗೆ 111 ಪ್ರಯಾಣಿಕರನ್ನ ಬಿಡುಗಡೆ ಮಾಡಿ, ವಿಮಾನ ಸಿಬ್ಬಂದಿಯನ್ನ ಒತ್ತೆಯಾಳಾಗಿರಿಸಿಕೊಂಡಿದ್ದ ಅಗಂತುಕರು, ಬಳಿಕ ಶರಣಾಗಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.