ಮಹಿಳೆಯೊಂದಿಗೆ ಅಸಭ್ಯ ವರ್ತನೆ; ಬಿಜೆಪಿ ಮುಖಂಡನಿಗೆ ಬಿತ್ತು ಗೂಸಾ

Published : Dec 22, 2016, 04:54 PM ISTUpdated : Apr 11, 2018, 01:13 PM IST
ಮಹಿಳೆಯೊಂದಿಗೆ ಅಸಭ್ಯ ವರ್ತನೆ; ಬಿಜೆಪಿ ಮುಖಂಡನಿಗೆ ಬಿತ್ತು ಗೂಸಾ

ಸಾರಾಂಶ

ಪೊಲೀಸ್ ಕ್ವಾಟ್ರಸ್ ಅಂದರೆ ಸುರಕ್ಷಿತವಾಗಿರೋ ಪ್ರದೇಶ ಅಂದ್ಕೊಂಡಿರುವತ್ತೇವೆ. ಆದರೆ ಅಲ್ಲೇ ಈ ರೀತಿ ನಡೆದರ? ಪೊಲೀಸ್ ಕ್ವಾಟ್ರಸ್‌'ಗೆ ನುಗ್ಗಿದಲ್ಲದೆ, ಪೊಲೀಸನ ಹೆಂಡತಿಯ ಜೊತೆಯೇ ಲವ್ವಿಡವ್ವಿ ನಡೆಸಿರುವ ಘಟನೆ ಬೆಂಗಳೂರಿನ ನಂದಿನಿ‌ ಲೇಔಟ್ ನಲ್ಲಿ ನಡೆದಿದೆ.

ಬೆಂಗಳೂರು (ಡಿ.24): ಮಾಜಿ ಸಚಿವ ಎಚ್ ವೈ ಮೇಟಿ ಕಾಮಪುರಾಣ ಇನ್ನೂ ಮಾಸಿಲ್ಲ. ಈ ನಡುವೆ ಬಿಜೆಪಿ ಮುಖಂಡನೋರ್ವ ಪೊಲೀಸ್ ಕ್ವಾಟ್ರಸ್‌ನಲ್ಲಿ  ಸಿಕ್ಕಿಬಿದ್ದಿದ್ದಾನೆ. ಪೊಲೀಸಪ್ಪನ ಪತ್ನಿಯೇ ಜೊತೆ ಕಾಮದಾಟ ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಇದರಿಂದ ಮುಜುಗರಕ್ಕೊಳಗಾದ ಕ್ವಾಟ್ರಸ್ ನಿವಾಸಿಗಳು, ಅವರಿಬ್ಬಗೆ ಗೂಸಾ ಕೊಟ್ಟು ಪೊಲೀಸ್ ಠಾಣೆಗೆ ಎಳೆದುತಂದಿದ್ದಾರೆ.

ಪೊಲೀಸ್ ಕ್ವಾಟ್ರಸ್ ಅಂದರೆ ಸುರಕ್ಷಿತವಾಗಿರೋ ಪ್ರದೇಶ ಅಂದ್ಕೊಂಡಿರುವತ್ತೇವೆ. ಆದರೆ ಅಲ್ಲೇ ಈ ರೀತಿ ನಡೆದರ? ಪೊಲೀಸ್ ಕ್ವಾಟ್ರಸ್‌'ಗೆ ನುಗ್ಗಿದಲ್ಲದೆ, ಪೊಲೀಸನ ಹೆಂಡತಿಯ ಜೊತೆಯೇ ಲವ್ವಿಡವ್ವಿ ನಡೆಸಿರುವ ಘಟನೆ ಬೆಂಗಳೂರಿನ ನಂದಿನಿ‌ ಲೇಔಟ್ ನಲ್ಲಿ ನಡೆದಿದೆ.

ಬಿಜೆಪಿ ಮುಖಂಡನ ಹೆಸರು ವೆಂಕಟೇಶ್, ಈತನ ಕಾಮಕೇಳಿ ಆಟಕ್ಕೆ ಸಾಥ್ ನೀಡ್ತಿದ್ದವಳು ಚಂದ್ರಕಲಾ.  ಚಂದ್ರಕಲಾ, ಎಸಿಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣಮೂರ್ತಿ ಪತ್ನಿ. ವೆಂಕಟೇಶ್ ಜೊತೆಗೆ ಪತ್ನಿಯ ಲವ್ವಿಡವ್ವಿ ಗೊತ್ತಿದ್ದರೂ ಕೃಷ್ಣಮೂರ್ತಿ ಸುಮ್ಮನಿದ್ದಂತೆ. ಆದರೆ ಇವರಿಬ್ಬರ ಈ ವರ್ತನೆ ಪೊಲೀಸ್ ಕ್ವಾಟ್ರಸ್ ನಿವಾಸಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ಯಾವಾಗ  ಕ್ವಾಟ್ರಸ್'ನ ಮೆಟ್ಟಿಲು, ಕಾರಿಡಾರ್‌ಗಳಲ್ಲಿ ಇವರಿಬ್ಬರ ಅಸಭ್ಯ ವರ್ತನೆ ಶುರುವಾಯ್ತೋ, ನಿವಾಸಿಗಳಿಗೆ ಓಡಾಡದಂತಹ ಪರಿಸ್ಥಿತಿ ಎದುರಾಯ್ತು. ಪ್ರಶ್ನಿಸಲು ಹೋದವರಿಗೆ, ನೋಡಕ್ಕಾಗದಿದ್ದರೇ ಕಣ್ ಮುಚ್ಚಿಕೊಳ್ಳಿ ಎಂಬ ಅಹಂಕಾರದ ಮಾತುಗಳನ್ನಾಡುತ್ತಿದ್ದರಂತೆ.

ನಿನ್ನೆ ರಾತ್ರಿಯೂ  ಪ್ರಶ್ನಿಸಲು ಹೋದವರಿಗೆ ಮತ್ತದೇ ಅಹಂಕಾರದ ಮಾತುಗನ್ನಾಡಿದ್ದಾರೆ. ಇದರಿಂದ  ರೋಸಿ ಹೋದ ಪೊಲೀಸ್ ಕ್ವಾಟ್ರಸ್ ಸಿಬ್ಬಂದಿ,  ಏಕಾಏಕಿ ಅವರಿಬ್ಬರನ್ನ ಥಳಿಸಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

ಇನ್ನೂ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್, ಕ್ವಾರ್ಟಸ್‌ಗಳ ನಿವಾಸಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದರಂತೆ. ಇದರಿಂದ ರೋಸಿಹೋದ ಕ್ವಾರ್ಟಸ್ ನಿವಾಸಿಗಳು, ಪೊಲೀಸರ ವಿರುದ್ಧವೇ ತಿರುಗಿಬಿದ್ದರು ಎನ್ನಲಾಗಿದೆ. ಸದ್ಯ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?