ಕನ್ನಡಿಗರೊಂದಿಗೆ ’ನಿಧಿ’ ನಂಟು; ಬೇವು ಬೆಲ್ಲ ಎರಡೂ ಉಂಟು!

Aug 8, 2018, 12:06 PM IST

ಚೆನ್ನೈ (ಆ. 08): ದ್ರಾವಿಡ ಹೋರಾಟದ ಪ್ರಮುಖ ಕೊಂಡಿ, ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಚಿರ ನಿದ್ರೆಗೆ ಜಾರಿದ್ದಾರೆ. 

ಕರ್ನಾಟಕದ ಜೊತೆಗೆ ಹೇಳಿಕೊಳ್ಳುವ ನಂಟಿಲ್ಲದಿದ್ದರೂ ರಾಜಕೀಯ ಸಂಬಂಧ ಸುಧಾರಣೆಗಾಗಿ ಹಲವು ಹೆಜ್ಜೆಗಳನ್ನು ಇಟ್ಟಿದ್ದರು. ರಾಜ್ ಕುಮಾರ್ ಅಪಹರಣವಾದಾಗ ಅವರನ್ನು ವಾಪಸ್ ಕರೆ ತರಲು ಸಹಾಯ ಮಾಡಿದ್ದರು. ದೇವೇಗೌಡರು ಪ್ರಧಾನಿಯಾಗಲು ಸಹಾಯ ಮಾಡಿದ್ದರು. ಬೆಂಗಳೂರಿನಲ್ಲಿ ತಿರುವಳ್ಳವರ್, ತಮಿಳುನಾಡಿನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪಿಸುವಲ್ಲಿ ಇವರ ಪಾತ್ರ ಪ್ರಮುಖವಾದದ್ದು.