ಕಾಂಗ್ರೆಸ್ ಅತೃಪ್ತರ ಬಣಕ್ಕೆ ಆಂಜನೇಯ ಬಲ

Published : Jun 13, 2018, 05:17 PM ISTUpdated : Jun 13, 2018, 05:41 PM IST
ಕಾಂಗ್ರೆಸ್ ಅತೃಪ್ತರ ಬಣಕ್ಕೆ ಆಂಜನೇಯ ಬಲ

ಸಾರಾಂಶ

ಸಚಿವ ಸಂಪುಟದಲ್ಲಿ ಎಡಗೈ ಸಮುದಾಯಕ್ಕೆ ಸ್ಥಾನ ಸಿಗದಿರುವ ಕಾರಣ ಅತೃಪ್ತ ಶಾಸಕರನ್ನು ಮಾಜಿ ಸಚಿವ ಎಚ್. ಆಂಜನೇಯ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅತೃಪ್ತ ಶಾಸಕ ಎಚ್.ಕೆ. ಪಾಟೀಲ್ ರನ್ನು ಮೊದಲಿಗೆ ಭೇಟಿ ಮಾಡಿದ ನಂತರ  ನಂತರ ಕಾಂಗ್ರೆಸ್ ಅತೃಪ್ತ ಬಣದ ನಾಯಕ ಎಂ.ಬಿ.ಪಾಟೀಲ್ ರನ್ನು ಭೇಟಿ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದಿದ್ದಾರೆ.

ಬೆಂಗಳೂರು ಜೂನ್ 13:  ಸಚಿವ ಸಂಪುಟದಲ್ಲಿ ಎಡಗೈ ಸಮುದಾಯಕ್ಕೆ ಸ್ಥಾನ ಸಿಗದಿರುವ ಕಾರಣ ಅತೃಪ್ತ ಶಾಸಕರನ್ನು ಮಾಜಿ ಸಚಿವ ಎಚ್. ಆಂಜನೇಯ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಅತೃಪ್ತ ಶಾಸಕ ಎಚ್.ಕೆ. ಪಾಟೀಲ್ ರನ್ನು ಮೊದಲಿಗೆ ಭೇಟಿ ಮಾಡಿದ ನಂತರ  ನಂತರ ಕಾಂಗ್ರೆಸ್ ಅತೃಪ್ತ ಬಣದ ನಾಯಕ ಎಂ.ಬಿ.ಪಾಟೀಲ್ ರನ್ನು ಭೇಟಿ ಮಾಡಿದರು.  ಎಡಗೈ ಸಮುದಾಯದ ಕೆ.ಎಚ್.ಮುನಿಯಪ್ಪ ಪುತ್ರಿ ರೂಪಾ ಶಶಿಧರ್ ಗೆ ಸಚಿವ ಸಂಪುಟ ಸ್ಥಾನ ಸಿಗಲು ಏನು ಮಾಡಬೇಕು ಎಂಬ ವಿಚಾರ ಭೇಟಿಯಲ್ಲಿ ಚರ್ಚೆಯಾಯಿತು.

ರೂಪಾ ಶಶಿಧರ್ ಗೆ ಸಚಿವ ಸ್ಥಾನ ಜೊತೆಗೆ ಉಳಿದ ಅತೃಪ್ತರಿಗೆ ಸಚಿವ ಸ್ಥಾನ ಪಡೆದುಕೊಳ್ಳುವ ಬಗ್ಗೆಯೂ ಚರ್ಚೆ ನಡೆಯಿತು. ಎರಡನೇ ಬಾರಿ ಸಚಿವ ಸಂಪುಟ ವಿಸ್ತರಣೆಯಾಗುವಾಗ ಎಷ್ಟು ಸಚಿವ ಸ್ಥಾನ ಪಡೆದುಕೊಳ್ಳಬೇಕು? ಮುಂದೆ ಯಾವ ಹೆಜ್ಜೆ ಇಡಬಹುದು? ಎಂಬುದನ್ನು ಉಭಯ ನಾಯಕರು ಪರಾಮರ್ಶೆ ಮಾಡಿದರು. ಅತೃಪ್ತ ನಾಯಕರ ಬಣದೊಂದಿಗೆ ನಾವಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಆಂಜನೇಯ ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌: ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ