
ಬೆಂಗಳೂರು[ಸೆ. 24] ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನ ಮೂರು ದಿನಗಳಿಗೆ ಸೀಮಿತಗೊಳಿಸಲಾಗಿದ್ದು, ಅಕ್ಟೋಬರ್ 10 ರಿಂದ 12 ವರೆಗೆ ನಡೆಯಲಿದೆ.
ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಮೂರು ದಿನ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಹೊಸ ಅಭಿವೃದ್ಧಿ ಕಾರ್ಯ, ಹೊಸ ಯೋಜನೆ ಘೋಷಿಸುವಂತೆ ಇಲ್ಲ. ನೆರೆ, ಬರ ಸಂಬಂಧಿ ಕಾರ್ಯಕ್ರಮಗಳಿಗೆ ನೀತಿ ಸಂಹಿತೆ ಅಡ್ಡಿ ಬರಲ್ಲ ಎಂಬುದನ್ನು ಸಿಎಂ ತಿಳಿಸಿದ್ದಾರೆ.
ಪೂರಕ ಬಜೆಟ್ ಗೆ ಅನುಮೋದನೆ: ಅಧಿವೇಶನದಲ್ಲಿ ಪೂರಕ ಬಜೆಟ್ಗೆ ಮಾತ್ರ ಅನುಮೋದನೆ ನೀಡಲಾಗುವುದು. ಉಳಿದಂತೆ ಯಾವುದೇ ಘೋಷಣೆ ಇಲ್ಲ ಎಂಬುದು ಸದ್ಯ ಸರ್ಕಾರದಿಂದ ಬಂದಿರುವ ಮಾಹಿತಿ.
ದೋಸ್ತಿಗಳ ಮಧ್ಯೆ ಹದ್ದು-ಗಿಣಿ ಗುದ್ದಾಟ: ಸಿದ್ದು ಕೊಟ್ಟ ಏಟಿಗೆ ಕುಮಾರಣ್ಣ ಒದ್ದಾಟ!
ಪ್ರತಿಪಕ್ಷಗಳಿಗೆ ನೆರೆಯೇ ಅಸ್ತ್ರ: ನೆರೆ ಸಂತ್ರಸ್ತರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ ಎಂನ ವಿಚಾರವನ್ನೇ ಇಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಮುಂದಾಗಿದ್ದರೂ ಅದಕ್ಕೆ ಕಾಲಾವಕಾಶ ಇಲ್ಲ. ಒಂದರ್ಥದಲ್ಲಿ ನೀತಿ ಸಂಹಿತೆ ಆಡಳಿತಾರೂಢ ಬಿಜೆಪಿಗೆ ವರವಾಗಿ ಪರಿಣಮಿಸಿದೆ.
ಎಲ್ಲರ ಚಿತ್ತ ಎಲೆಕ್ಷನ್ ಅತ್ತ: ಮೂರು ದಿನದ ಅಧಿವೇಶನ ನಾಮಕಾವಸ್ಥೆ ಎನ್ನುವುದು ಮೇಲು ನೋಟಕ್ಕೆ ಸತ್ಯದಂತೆ ಕಾಣುತ್ತಿದೆ. ಕೆಲವೊಂದಕ್ಕೆ ಅನುಮೋದನೆ ಮಾತ್ರ ಸಿಗಬಹುದು . ಗಂಭೀರ ಚರ್ಚೆಗೆ ಅವಕಾಶ ಇಲ್ಲ. ಎಲ್ಲರ ಗಮನವೂ ಉಪಚುನಾವಣೆ ಮೇಲೆ ಇರುತ್ತದೆ. ಪ್ರತಿ ಸಾರಿ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿದ್ದುದ್ದು ವಾಡಿಕೆ. ಆದರೆ ಈ ಸಾರಿ ಬಿಜೆಪಿ ಸರ್ಕಾರ ನೆರೆ ಕಾರಣಕ್ಕೆ ಬೆಂಗಳೂರಿನಲ್ಲಿಯೇ ಇಟ್ಟುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.