
ಚಿತ್ರದುರ್ಗ(ಡಿ. 10): ಕೇಂದ್ರ ಅದಾಯ ತೆರಿಗೆ ಅಧಿಕಾರಿಗಳು ಚಳ್ಳಕೆರೆಯಲ್ಲಿ ಚಿತ್ರನಟ ದೊಡ್ಡಣ್ಣನವರ ಅಳಿಯ ವೀರೇಂದ್ರ ಅವರ ನಿವಾಸ ಸೇರಿದಂತೆ ಮೂವರು ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಒಂದೇ ಮನೆಯಲ್ಲಿ 5.7 ಕೋಟಿ ಮೌಲ್ಯದ ಹೊಸ ಕರೆನ್ಸಿ ಹಾಗೂ 90 ಲಕ್ಷ ಮೌಲ್ಯದ 100 ಮತ್ತು 20 ಮುಖಬೆಲೆಯ ನೋಟುಗಳು ಸಿಕ್ಕಿವೆ ಎನ್ನಲಾಗಿದೆ. ಮನೆಯ ಬಾತ್'ರೂಮಿನ ಸೀಕ್ರೆಟ್ ಛೇಂಬರ್'ನಲ್ಲಿ ಈ ಹಣವನ್ನು ಅಟಗಿಸಿಡಲಾಗಿತ್ತು. ನಗದು ಹಣದ ಜೊತೆಗೆ 4 ಕಿಲೋ ಚಿನ್ನಾಭರಣಗಳು ಹಾಗೂ ವಿವಿಧ ದಾಖಲೆಪತ್ರಗಳನ್ನು ಐಟಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ರೇಡ್ ಆದ ಇತರ ಎರಡು ಮನೆಗಳು ನಾಗರಾಜ್ ಮತ್ತು ತಿಪ್ಪೇಸ್ವಾಮಿ ಅವರಿಗೆ ಸೇರಿದ್ದಾಗಿದೆ. ಇವರಿಬ್ಬರೂ ಕೂಡ ದೊಡ್ಡಣ್ಣನವರ ಅಳಿಯ ವೀರೇಂದ್ರ ಅವರ ಸೋದರರೆನ್ನಲಾಗಿದೆ. ಉದ್ಯಮಿಯಾಗಿರುವ ವೀರೇಂದ್ರ ಅವರು ಜೆಡಿಎಸ್ ಮುಖಂಡರೂ ಆಗಿದ್ದಾರೆ.
ಇದೇ ವೇಳೆ, ಈ ಮೂರು ಮನೆಗಳು ಸೇರಿದಂತೆ ಐಟಿ ಅಧಿಕಾರಿಗಳು ಕರ್ನಾಟಕ ಹಾಗೂ ಗೋವಾಗಳಲ್ಲಿ 15 ಕಡೆ ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ಕೆಲ ಮನೆಗಳ ಮೇಲೂ ರೇಡ್ ಆಗಿದೆ. ಹವಾಲಾ ಆಪರೇಟರ್ಸ್ ಮತ್ತು ಷೇರು ದಲ್ಲಾಳಿಗಳನ್ನು ಟಾರ್ಗೆ ಮಾಡಿ ಐಟಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.