ಜೆಡಿಎಸ್ ಮುಖಂಡ ವೀರೇಂದ್ರ ಸಹೋದರರ ಮನೆ ಮೇಲೂ ಐಟಿ ದಾಳಿ

Published : Dec 10, 2016, 11:08 AM ISTUpdated : Apr 11, 2018, 12:57 PM IST
ಜೆಡಿಎಸ್ ಮುಖಂಡ ವೀರೇಂದ್ರ ಸಹೋದರರ ಮನೆ ಮೇಲೂ ಐಟಿ ದಾಳಿ

ಸಾರಾಂಶ

ಚಿತ್ರ ನಟ ದೊಡ್ಡಣ್ಣನ ಅಳಿಯ ಕೆ.ಸಿ. ವೀರೇಂದ್ರ ಅಲಿಯಾಸ್ ಪಪ್ಪಿ ಜೆಡಿಎಸ್ ಮುಖಂಡನ ಮನೆ ಮೇಲೆ ಐಟಿ ದಾಳಿ ನಡೆಸಿದ ಬಳಿಕ ಕೆ.ಸಿ ನಾಗರಾಜ್ ಮತ್ತು ತಿಪ್ಪೇಸ್ಬಾಮಿ ನೇತೃತ್ವದ ತಂಡ ವೀರೇಂದ್ರ ಅಣ್ಣಂದಿರ ಮನೆಗಳ  ಮೇಲೆಯೂ ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.

ಚಿತ್ರದುರ್ಗ (ಡಿ.10): ಚಿತ್ರ ನಟ ದೊಡ್ಡಣ್ಣನ ಅಳಿಯ ಕೆ.ಸಿ. ವೀರೇಂದ್ರ ಅಲಿಯಾಸ್ ಪಪ್ಪಿ ಜೆಡಿಎಸ್ ಮುಖಂಡನ ಮನೆ ಮೇಲೆ ಐಟಿ ದಾಳಿ ನಡೆಸಿದ ಬಳಿಕ ಕೆ.ಸಿ ನಾಗರಾಜ್ ಮತ್ತು ತಿಪ್ಪೇಸ್ಬಾಮಿ ನೇತೃತ್ವದ ತಂಡ ವೀರೇಂದ್ರ ಅಣ್ಣಂದಿರ ಮನೆಗಳ  ಮೇಲೆಯೂ ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.

ನಿನ್ನೆ ಮಧ್ಯಾಹ್ನದಿಂದ ಇಲ್ಲಿಯವರೆಗೆ ಪರಿಶೀಲನಾ ಕಾರ್ಯ ಮುಂದುವರೆದಿದೆ. ಬ್ಯಾಂಕಿಗೆ ಮೂರು ಬಾರಿ ಹೋಗಿ ಬಂದಿರುವ ಅಧಿಕಾರಿಗಳು ಮನೆಯಲ್ಲಿ ಯಾವುದೇ ಹಣ ದೊರೆತಿಲ್ಲ ಎಂದು ಹೇಳಿದ್ದಾರೆ. 

ಅದರೆ ಇದುವರೆಗೂ ಐಟಿ ಅಧಿಕಾರಿಗಳು ಯಾವುದೆ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ.

ಬಳ್ಳಾರಿ ರಸ್ತೆಯಲ್ಲಿರುವ ಮನೆಗಳು ಹಾಗೂ ಕಡತಗಳ ಬಗ್ಗೆ ಪರೀಶೀಲನೆ ನಡೆಸುತ್ತಿರುವ ವಿಜುವಲ್ಸ್ ಗಳನ್ನು ನಿನ್ನೆ ಡಿಲೀಟ್ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೆ ಉಡಾಫೆ ಉತ್ತರ ನೀಡಿದ್ದು ನಾವು ಮೀಡಿಯಾದವರು ಎಂದಾಗ ವಾಟ್ ಈಸ್ ಮೀಡಿಯಾ  ಎಂದು ವ್ಯಂಗ್ಯವಾಡಿದ್ದಾರೆ.

ಐಟಿ ಅಧಿಕಾರಿಗಳು ಇಂದೂ ಕೂಡ ಶೋಧವನ್ನು ಮುಂದುವರೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರೀತಿಸಿ ಮದುವೆಯಾದ ಮಗಳ ರಕ್ತದಲ್ಲಿ ಕೈ ತೊಳೆದ ತಂದೆ; ಹುಬ್ಬಳ್ಳಿಯಲ್ಲಿ ಮರ್ಯಾದ ಹ*ತ್ಯೆ
ಹೂವಿನಹಡಗಲಿ: ಕೇಳಿದ್ದು 237 ಕೊಠಡಿ, ಸರ್ಕಾರ ಕೊಟ್ಟಿದ್ದು ಒಂದೇ ಕೊಠಡಿ! ಮಕ್ಕಳ ಶಿಕ್ಷಣಕ್ಕೆ ಇಲ್ವಾ ಬೆಲೆ?