ಬಿಜೆಪಿಗೆ ಸೌರಾಷ್ಟ್ರದ್ದೇ ಚಿಂತೆ

Published : Nov 21, 2017, 05:20 PM ISTUpdated : Apr 11, 2018, 12:53 PM IST
ಬಿಜೆಪಿಗೆ ಸೌರಾಷ್ಟ್ರದ್ದೇ ಚಿಂತೆ

ಸಾರಾಂಶ

ಗುಜರಾತ್ ಚುನಾವಣೆಗಾಗಿನ ಕಾಂಗ್ರೆಸ್ ಮತ್ತು ಬಿಜೆಪಿಗಳ ಟಿಕೆಟ್ ಹಂಚಿಕೆ ಪ್ರಕ್ರಿಯೆ ಬಹುತೇಕ ಮುಗಿದಿದ್ದು, ಬಿಜೆಪಿಗೆ ತನ್ನ ಒಂದು ಕಾಲದ ಭದ್ರಕೋಟೆ ಸೌರಾಷ್ಟ್ರ ಮತ್ತು ಉತ್ತರ ಗುಜರಾತ್‌ಗಳಲ್ಲಿ ಕಾಂಗ್ರೆಸ್‌ನ ಬೆಳೆಯುತ್ತಿರುವ ಜನಪ್ರಿಯತೆ ನೋಡಿ ಚಿಂತೆ ಶುರುವಾಗಿದೆ. ಕಾಂಗ್ರೆಸ್‌ಗೆ ತನ್ನ ಭದ್ರಕೋಟೆ ದಕ್ಷಿಣ ಮತ್ತು ಮಧ್ಯ ಗುಜರಾತ್‌ಗಳಲ್ಲಿ ಬಿಜೆಪಿ ಗೆಲುವನ್ನು ನಿಲ್ಲಿಸುವುದು ಹೇಗೆ ಎಂಬುದೇ ತಿಳಿಯುತ್ತಿಲ್ಲ.

ಗುಜರಾತ್ ಚುನಾವಣೆಗಾಗಿನ ಕಾಂಗ್ರೆಸ್ ಮತ್ತು ಬಿಜೆಪಿಗಳ ಟಿಕೆಟ್ ಹಂಚಿಕೆ ಪ್ರಕ್ರಿಯೆ ಬಹುತೇಕ ಮುಗಿದಿದ್ದು, ಬಿಜೆಪಿಗೆ ತನ್ನ ಒಂದು ಕಾಲದ ಭದ್ರಕೋಟೆ ಸೌರಾಷ್ಟ್ರ ಮತ್ತು ಉತ್ತರ ಗುಜರಾತ್‌ಗಳಲ್ಲಿ ಕಾಂಗ್ರೆಸ್‌ನ ಬೆಳೆಯುತ್ತಿರುವ ಜನಪ್ರಿಯತೆ ನೋಡಿ ಚಿಂತೆ ಶುರುವಾಗಿದೆ. ಕಾಂಗ್ರೆಸ್‌ಗೆ ತನ್ನ ಭದ್ರಕೋಟೆ ದಕ್ಷಿಣ ಮತ್ತು ಮಧ್ಯ ಗುಜರಾತ್‌ಗಳಲ್ಲಿ ಬಿಜೆಪಿ ಗೆಲುವನ್ನು ನಿಲ್ಲಿಸುವುದು ಹೇಗೆ ಎಂಬುದೇ ತಿಳಿಯುತ್ತಿಲ್ಲ.

ಸೌರಾಷ್ಟ್ರದಲ್ಲಿ 54 ಸೀಟ್‌ಗಳಿದ್ದರೆ ಉತ್ತರ ಗುಜರಾತ್ ನಲ್ಲಿ 53 ಸೀಟ್‌ಗಳಿವೆ. ಈ ಎರಡು ಭಾಗಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೆಚ್ಚು ಕಡಿಮೆ ಸಮಬಲದಲ್ಲಿವೆ. ಆದರೆ ದಕ್ಷಿಣ ಮತ್ತು ಮಧ್ಯ ಗುಜರಾತ್‌ಗಳಲ್ಲಿ ಬಿಜೆಪಿ 75 ಸ್ಥಾನಗಳಲ್ಲಿ ಸಿಂಹಪಾಲನ್ನು ಪಡೆಯುವ ಸಾಧ್ಯತೆ ಕಾಣುತ್ತಿದೆ. ಪಾಟಿದಾರ ಪಟೇಲರ ಬಾಹುಳ್ಯ ಇರುವ ಸೌರಾಷ್ಟ್ರದ 54 ಸೀಟ್‌ಗಳಲ್ಲಿ ಎಷ್ಟು ಗೆಲ್ಲಬಹುದು ಎಂಬುದು ಬಹುತೇಕ ಗುಜರಾತ್ ಭವಿಷ್ಯ ಬರೆಯಲಿದೆ.

ಕಳೆದ ಬಾರಿ ಕೇಶುಭಾಯಿ ಪಟೇಲರ ಪರಿವರ್ತನಾ ಪಾರ್ಟಿ 8 ಪ್ರತಿಶತ ಮತ ಪಡೆದಿದ್ದರೂ ಕೂಡ ಬಿಜೆಪಿ 45 ಪ್ರತಿಶತ ಮತಗಳೊಂದಿಗೆ 34 ಸ್ಥಾನ ಗೆದ್ದುಕೊಂಡಿತ್ತು. ಆದರೆ ಸೌರಾಷ್ಟ್ರದಲ್ಲಿ ಪಟೇಲರ ಬಿಜೆಪಿ ಮೇಲಿನ ಸಿಟ್ಟು ಉಳಿದ ಪ್ರದೇಶಗಳಲ್ಲಿ ಬಿಜೆಪಿ ಜೊತೆಗೆ ಇತರ ಸಣ್ಣ ಸಣ್ಣ ಸಮುದಾಯಗಳು ಬರಲು ಸಹಾಯ ಮಾಡುತ್ತಿದೆ. ಗುಜರಾತ್‌ನಲ್ಲಿ

ಓಡಾಡಿ ಬರುತ್ತಿರುವ ದೆಹಲಿ ಪತ್ರಕರ್ತರು ಹೇಳುವ ಪ್ರಕಾರ ನಗರ ಪ್ರದೇಶಗಳಲ್ಲಿ ಬಿಜೆಪಿಗೆ ಅಷ್ಟೇನೂ ಸಮಸ್ಯೆ ಇಲ್ಲ. ಆದರೆ ಗ್ರಾಮೀಣ ಗುಜರಾತಿಗಳು ಮಾತ್ರ ಬಿಜೆಪಿ ಬಗ್ಗೆ ಖುಷಿಯಾಗಿಲ್ಲವಂತೆ. ಅಂದ ಹಾಗೆ ಮೋದಿ ಸಾಹೇಬರು ಮೊದಲ ಹಂತದ ಚುನಾವಣೆಯ ಪ್ರಚಾರದ ಕೊನೆಯ ಮೂರು ದಿನ ಸೌರಾಷ್ಟ್ರದ ಸೂರತ್‌ನಲ್ಲಿಯೇ ಬೀಡು ಬಿಡಲಿದ್ದಾರಂತೆ.

ಇಂಡಿಯಾ ಗೇಟ್’ನಲ್ಲಿ ಪ್ರಶಾಂತ್ ನಾತು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ದೇಶದಲ್ಲಿ ದೇವರಿಗೇ ಜಾಗವಿಲ್ಲ; ಬೈಬಲ್, ಕುರಾನ್ ಸಿಕ್ಕರೆ ನೇರ ಜೈಲು, ಮರಣದಂಡನೆ!
ಟ್ರಾಫಿಕ್ ದಂಡ ಇನ್ನೂ ಕಟ್ವಿಲ್ವಾ? ಹೀಗೆ ಭಾರತದಲ್ಲಿ ಬಾಕಿ ಉಳಿದಿರುವ ಮೊತ್ತ 39000 ಕೋಟಿ ರೂ