ಹೋಟೆಲ್ ಮಾಲೀಕನ ಮೇಲೆ ಎಸಿಪಿ ಹಲ್ಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಎಸಿಪಿ ವಿರುದ್ಧ ದೂರು ಕೊಟ್ಟಿರುವ ಬೆನ್ನಲ್ಲೇ ಹೋಟೆಲ್ ಮಾಲೀಕ ರಾಜೀವ್ ಶೆಟ್ಟಿಗೆ ಕೊಲೆ ಬೆದರಿಕೆ ಬಂದಿದೆ.
ಬೆಂಗಳೂರು: ಹೋಟೆಲ್ ಮಾಲೀಕನ ಮೇಲೆ ಎಸಿಪಿ ಹಲ್ಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಎಸಿಪಿ ವಿರುದ್ಧ ದೂರು ಕೊಟ್ಟಿರುವ ಬೆನ್ನಲ್ಲೇ ಹೋಟೆಲ್ ಮಾಲೀಕ ರಾಜೀವ್ ಶೆಟ್ಟಿಗೆ ಕೊಲೆ ಬೆದರಿಕೆ ಬಂದಿದೆ.
ರಾಜೀವ್ ಶೆಟ್ಟಿಗೆ ನಿನ್ನೆ ವ್ಯಕ್ತಿಯೊಬ್ಬನು ಪೋನ್ ಮಾಡಿ ಭೂಗತ ಪಾತಕಿ ರವಿಪೂಜಾರಿ ಹೆಸರು ಹೇಳಿಕೊಂಡು ಕೊಲೆ ಬೆದರಿಕೆ ಹಾಕಿದ್ದಾನೆನ್ನಲಾಗಿದೆ.
ಆಸ್ಟ್ರೇಲಿಯಾದಿಂದ ಕರೆ ಮಾಡ್ತಾ ಇದ್ದೀನಿ ಎಂದು ರಾಜೀವ್ ಶೆಟ್ಟಿಗೆ ಬೆದರಿಕೆ ಹಾಕಿದ ಆ ವ್ಯಕ್ತಿ, ‘ನಾನ್ಯಾರು ಅಂತ ಗೊತ್ತು ಅಲ್ವಾ ನಿನಗೆ? ಇನ್ನು ಅರ್ಧ ಗಂಟೆಯಲ್ಲಿ ಹೋಟೆಲ್ ಬಾಗಿಲು ಹಾಕದಿದ್ರೆ ಕೊಲೆ ಮಾಡ್ತೀನಿ’ ಎಂದು ಧಮ್ಕಿ ಹಾಕಿದ್ದಾನೆಂದು ರಾಜೀವ್ ಶೆಟ್ಟಿ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.