ಯಾವ ಲೆಕ್ಕ ಹುಲು ಮಾನವರು?: ವಾಯುಮಾಲಿನ್ಯದಿಂದ ಮಾಸ್ಕ್ ಧರಿಸಿದ ದೇವರು!

By Web DeskFirst Published Nov 6, 2019, 3:25 PM IST
Highlights

ವಾಯುಮಾಲಿನ್ಯದಿಂದ ಮಾಸ್ಕ್ ಮೊರೆ ಹೋದ ದೇವರು| ವಾರಾಣಸಿಯಲ್ಲಿ ದೇವರ ಮೂರ್ತಿಗಳಿಗೆ ಮಾಸ್ಕ್ ಹಾಕಿದ ಅರ್ಚಕರು|  ಸಿಗ್ರಾ ಪ್ರದೇಶದಲ್ಲಿರುವ ಶಿವ-ಪಾರ್ವತಿ ದೇವಸ್ಥಾನದಲ್ಲಿ ದೇವರ ಮೂರ್ತಿಗಳಿಗೆ ಮಾಸ್ಕ್| ಶಿವ, ದುರ್ಗಾ ಹಾಗೂ ಸಾಯಿಬಾಬಾ ದೇವರ ಮೂರ್ತಿಗಳಿಗೆ ಮಾಸ್ಕ್| ಅಪರಿಶುದ್ಧ ಗಾಳಿ ದೇವರಿಗೆ ತಾಗಬಾರದು ಎಂಬ ಕಾರಣಕ್ಕೆ ಮಾಸ್ಕ್|

ವಾರಾಣಸಿ(ನ.06): ರಾಷ್ಟ್ರ ರಾಜಧಾನಿ ನವದೆಹಲಿ ತೀವ್ರತರವಾದ ವಾಯುಮಾಲಿನ್ಯದಿಂದ ಕಂಗಾಲಾಗಿದೆ. ಅಪರಿಶುದ್ಧ ಗಾಳಿ ದೆಹಲಿ ಮಾತ್ರವಲ್ಲದೇ ಹತ್ತಿರದ ಉತ್ತರಪ್ರದೇಶಕ್ಕೂ ಪಸರಿಸಿ ಜನರಲ್ಲಿ ಆತಂಕ ಸೃಷ್ಟಿಸಿದೆ.

ರಾಜಧಾನಿಯಲ್ಲಿ ಮಾಲಿನ್ಯ ವಿಪರೀತಕ್ಕೆ

ಈ ಮಧ್ಯೆ ವಾಯುಮಾಲಿನ್ಯದ ಪರಿಣಾಮವಾಗಿ ಪ್ರಧಾನಿ ಮೋದಿ ಸ್ವಕ್ಷೇತ್ರ ವಾರಾಣಸಿಲ್ಲಿ ದೇವರಿಗೆ ಮಾಸ್ಕ್ ಹಾಕಲಾಗಿದೆ. ಇಲ್ಲಿನ ಸಿಗ್ರಾ ಪ್ರದೇಶದಲ್ಲಿರುವ ಶಿವ-ಪಾರ್ವತಿ ದೇವಸ್ಥಾನದಲ್ಲಿ ದೇವರ ಮೂರ್ತಿಗಳಿಗೆ ಮಾಸ್ಕ್ ಹಾಕಲಾಗಿದೆ.

ರಾಜಧಾನಿ ಮಾಲಿನ್ಯ: ಸರ್ಕಾರದ ವಿರುದ್ಧ ಸುಪ್ರೀಂ

ಶಿವ, ದುರ್ಗಾ ಹಾಗೂ ಸಾಯಿಬಾಬಾ ದೇವರ ಮೂರ್ತಿಗಳಿಗೆ ಮಾಸ್ಕ್ ಹಾಕಲಾಗಿದ್ದು, ಅಪರಿಶುದ್ಧ ಗಾಳಿ ದೇವರಿಗೆ ತಾಗಬಾರದು ಎಂಬ ಕಾರಣಕ್ಕೆ ಮಾಸ್ಕ್ ಹಾಕಲಾಗಿದೆ ಎಂದು ಪೂಜಾರಿಗಳು ತಿಳಿಸಿದ್ದಾರೆ.

पर्यावरण की भयावह स्थिति को देखते हुए वाराणसी के सिगरा स्थित मंदिर में पुजारी हरीश मिश्रा और भक्तों ने बाबा भोलेनाथ समेत देवी दुर्गा और काली माता समेत साईं बाबा का पूजन कर मास्क पहनाया.. pic.twitter.com/VyFOFdIhu5

— Priya Jain | پریا جان | પ્રિયા જૈન (@VJpriyaJ)

ಮಾಲಿನ್ಯ ಕೊಂಚ ಇಳಿಕೆ: ರಾಜಕೀಯ ಕಿತ್ತಾಟ ಏರಿಕೆ

ಈ ಕುರಿತು ಮಾಹಿತಿ ನೀಡಿರುವ ದೇವಸ್ಥಾನದ ಮುಖ್ಯ ಅರ್ಚಕ, ಚಳಿಗಾಲದಲ್ಲಿ ದೇವರಿಗೆ ಚಳಿಯಾಗಬಾರದು ಎಂಬ ಕಾರಣಕ್ಕೆ ಕಂಬಳಿ ಹೊದಿಸಲಾಗುತ್ತದೆ. ಅದರಂತೆ ಅಪರಿಶುದ್ಧ ವಾತಾವರಣದಲ್ಲಿ ದೇವರ ಮೂರ್ತಿಗಳಿಗೆ ಮಾಸ್ಕ್ ಹೊದಿಸಲಾಗಿದೆ ಎಂದು ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಮತ್ತೆ ಸಮ-ಬೆಸ ಸಂಚಾರ; ಮಾಲಿನ್ಯ ತಡೆಗೆ ದೆಹಲಿ ಸರ್ಕಾರ ಪ್ರಯೋಗ

click me!