ಪ್ರೇಯಸಿಯನ್ನು ಗುರಾಯಿಸಿದ್ದಕ್ಕೆ ಥಳಿತ, 23ರ ಯುವಕ ಸಾವು!

Published : Jun 15, 2019, 02:49 PM IST
ಪ್ರೇಯಸಿಯನ್ನು ಗುರಾಯಿಸಿದ್ದಕ್ಕೆ ಥಳಿತ, 23ರ ಯುವಕ ಸಾವು!

ಸಾರಾಂಶ

ಪ್ರೇಯಸಿಯನ್ನು ಗುರಾಯಿಸಿದ್ದಕ್ಕೆ ಸಾಯುವಂತೆ ಹೊಡೆದ| ತಲೆಗೆ ಗಂಭೀರ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಸಾವು| ಆರೋಪಿ ವಿರುದ್ಧ ದಾಖಲಾಗಿವೆ 16ಕ್ಕೂ ಹೆಚ್ಚು ಪ್ರಕರಣಗಳು

ಹೈದರಾಬಾದ್[ಜೂ.15]: ಹೈದರಾಬಾದ್ ನಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಗುರಾಯಿಸಿದನೆಂದು, ಸಾಯಿ ಹೆಸರಿನ 23 ವರ್ಷದ ಯುವಕನನ್ನು ಥಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಚಿಕಿತ್ಸೆಗೆ ಸ್ಪಂದಿಸದ ಯುವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಏನಿದು ಪ್ರಕರಣ?

ಜೂನ್ 13ರಂದು ಬಾಲಕೃಷ್ಣ ತನ್ನ ಗೆಳೆಯರಾದ ಸಾಯಿ ಹಾಗೂ ಮಹೇಶ್ ಜೊತೆ ಹುಟ್ಟುಹಬ್ಬ ಆಚರಿಸಲು ಹೊರಹೋಗಿದ್ದ. ಮೂವರೂ ಸೇರಿ ಪಾರ್ಟಿ ನಡೆಸಿ, ಭರ್ಜರಿಯಾಗಿ ತಿಂದು, ಕುಡಿದು ಮಜಾ ಮಾಡಿದ್ದಾರೆ. ಮನೆಗೆ ಮರಳುತ್ತಿದ್ದ ವೇಳೆ ನೆಕ್ಲೆಸ್ ರೋಡ್ ನಲ್ಲಿ ಪ್ರೇಮಿಗಳಿಬ್ಬರು ನಿಂತಿರುವುದನ್ನು ಕಂಡು, ಮೂವರೂ ಗುರಾಯಿಸಿದ್ದಾರೆ. ಇದರಿಂದ ಕೋಪಗೊಂಡ ಹುಡುಗಿಯ ಬಾಯ್ ಫ್ರೆಂಡ್ ಜುನೈದ್ ಮೂವರಿಗೂ ಅವಾಚ್ಯ ಪದಗಳಿಂದ ಬೈಯ್ಯಲಾರಂಭಿಸಿದ್ದಾನೆ.

ಇದಾದ ಬಳಿಕ ಈ ಜಗಳ ತಾರಕಕ್ಕೇರಿದೆ. ನೋಡ ನೊಡುತ್ತಿದ್ದಂತೆಯೇ ಕೋಗೊಂಡ ಜುನೈದ್ ಸಾಯಿ ಮೇಲೆ ಕಲ್ಲುಗಳನ್ನೆಸೆದಿದ್ದಾನೆ. ಇದರಿಂದ ಆತನ ತಲೆಗೆ ಗಂಭೀರ ಗಾಯವಾಗಿದೆ. ಘಟನೆಯ ಮಾಹಿತಿ ಪಡೆದ ಪೊಲೀಸರು ಆ ಕೂಡಲೇ ಸ್ಥಳಕ್ಕಾಗಮಿಸಿ, ಸಾಯಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಹಾಗೂ ಆರೋಪಿ ಜುನೈದ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. 

ಇತ್ತ ಆಸ್ಪತ್ರೆಗೆ ದಾಖಲಿಸಲಾಗಿದ್ದ ಸಾಯಿ ಚಿಕಿತ್ಸೆ ನೀಡುತ್ತಿದ್ದಾಗಲೇ ಕೊನೆಯುಸಿರೆಳೆದಿದ್ದಾನೆ. ಇನ್ನು ಬಂಧಿತ ಆರೋಪಿ ಜುನೈದ್ ವಿರುದ್ಧ ಈ ಮೊದಲೇ 16 ಪ್ರಕರಣಗಳು ದಾಖಲಾಗಿವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್