ಫೇಸ್‌ಬುಕ್‌ ಪೋಸ್ಟ್‌ನಿಂದ ಖದೀಮ ಪೊಲೀಸ್‌ ಬಲೆಗೆ

Published : Oct 04, 2019, 11:19 AM ISTUpdated : Oct 04, 2019, 11:23 AM IST
ಫೇಸ್‌ಬುಕ್‌ ಪೋಸ್ಟ್‌ನಿಂದ  ಖದೀಮ ಪೊಲೀಸ್‌ ಬಲೆಗೆ

ಸಾರಾಂಶ

ಫೇಸ್ ಬುಕ್ ಪೋಸ್ಟ್ ನಿಂದ ದರೋಡೆಕೋರ ಪೊಲೀಸ್ ಬಲೆಗೆ | ಶಿಮ್ಲಾ ಪ್ರವಾಸದ ಫೋಟೋ ಹಾಕಿ ಎಡವಟ್ಟು ಮಾಡಿಕೊಂಡ ಖದೀಮ | ಅಂಗಡಿಗೆ ನುಗ್ಗಿದ ಮೂವರು ಖದೀಮರು ಗನ್‌ ತೋರಿಸಿ 27 ಸಾವಿರ ಕೋಟಿ ರು. ಸುಲಿಗೆ ಮಾಡಿ ಪರಾರಿಯಾಗಿದ್ದರು 

ನವದೆಹಲಿ (ಅ. 04): ಇತ್ತೀಚೆಗಷ್ಟೇ ದೆಹಲಿಯ ಅಂಗಡಿಯೊಂದರಲ್ಲಿ ಸುಲಿಗೆ ಮಾಡಿ ಪರಾರಿಯಾಗಿದ್ದ ದರೋಡೆಕೋರನೋರ್ವ ಫೇಸ್ಬುಕ್‌ ಪೋಸ್ಟ್‌ನಿಂದ ಸಿಕ್ಕಿಬಿದ್ದಿದ್ದಾನೆ. ದೆಹಲಿ ಮೂಲದ ವ್ಯಕ್ತಿಯೋರ್ವನ ಅಂಗಡಿಗೆ ನುಗ್ಗಿದ ಮೂವರು ಖದೀಮರು ಗನ್‌ ತೋರಿಸಿ 27 ಸಾವಿರ ಕೋಟಿ ರು. ಸುಲಿಗೆ ಮಾಡಿ ಪರಾರಿಯಾಗಿದ್ದರು.

ದರೋಡೆ ಮಾಡಿದ ಹಣದಿಂದಲೇ ಶಿಮ್ಲಾ ಪ್ರವಾಸ ಕೈಗೊಂಡಿದ್ದ ಪ್ರಮುಖ ಆರೋಪಿ ಶುಭಂ, ಈ ಕುರಿತಾದ ಫೋಟೋಗಳನ್ನು ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ್ದ. ಸುಲಿಗೆಯಲ್ಲಿ ಆತನ ಕೈವಾಡ ಅರಿತ ಪೊಲೀಸರಿಗೆ ಫೇಸ್‌ಬುಕ್‌ ಪೋಸ್ಟ್‌ನಿಂದಾಗಿ ಆತ ಶಿಮ್ಲಾದಲ್ಲಿರುವುದು ತಿಳಿಯಿತು. ಅಲ್ಲಿಗೆ ತೆರಳಿದ ತಂಡ ಶುಭಂನನ್ನು ದಿಲ್ಲಿಗೆ ಕರೆತಂದು ಡ್ರಿಲ್‌ ಮಾಡುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು