ಅಧಿಕಾರದಲ್ಲಿರುವವರನ್ನು ಕೆಳಗಿಸಲು ಗೊತ್ತು: ಗುಜರಾತ್ ರೈತರ ಎಚ್ಚರಿಕೆ

Published : Jul 05, 2017, 08:01 PM ISTUpdated : Apr 11, 2018, 12:58 PM IST
ಅಧಿಕಾರದಲ್ಲಿರುವವರನ್ನು ಕೆಳಗಿಸಲು ಗೊತ್ತು: ಗುಜರಾತ್ ರೈತರ ಎಚ್ಚರಿಕೆ

ಸಾರಾಂಶ

ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ಬಳಿಕ ರೈತರ ಸರ್ಕಾರ ಸಾಲ ಮನ್ನಾ ಹೋರಾಟದ ಬಿಸಿ  ಪ್ರಧಾನಿ ತವರುರಾಜ್ಯ ಗುಜರಾತ್’ಗೂ ತಟ್ಟಿದೆ. ಕ್ಷತ್ರಿಯ ಸೇನಾ ಠಾಕೂರ್ ನೇತೃತ್ವದಲ್ಲಿ ಇಂದು ನಡೆದ ಹೋರಾಟದಲ್ಲಿ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ರೈತರು ನೂರಾರು ಲೀಟರ್ ಹಾಲನ್ನು ರಸ್ತೆಗೆ ಸುರಿದು ಪ್ರತಿಭಟಿಸಿದ್ದಾರೆ.

ಅಹಮದಾಬಾದ್ (ಜು.05): ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ಬಳಿಕ ರೈತರ ಸರ್ಕಾರ ಸಾಲ ಮನ್ನಾ ಹೋರಾಟದ ಬಿಸಿ  ಪ್ರಧಾನಿ ತವರುರಾಜ್ಯ ಗುಜರಾತ್’ಗೂ ತಟ್ಟಿದೆ.

ಕ್ಷತ್ರಿಯ ಸೇನಾ ಠಾಕೂರ್ ನೇತೃತ್ವದಲ್ಲಿ ಇಂದು ನಡೆದ ಹೋರಾಟದಲ್ಲಿ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ರೈತರು ನೂರಾರು ಲೀಟರ್ ಹಾಲನ್ನು ರಸ್ತೆಗೆ ಸುರಿದು ಪ್ರತಿಭಟಿಸಿದ್ದಾರೆ.

ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳದ ಪಕ್ಷದಲ್ಲಿ ಹೈನುಗಾರರು ಹಾಲನ್ನು ಡೈರಿಗೆ ನೀಡದೇ ರಸ್ತೆಗೆ ಚೆಲ್ಲುವುದಾಗಿ ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು. ಹಾಲು ರಸ್ತೆಗೆ ಚೆಲ್ಲುವುದನ್ನು ತಡೆಯಲು ಅಧಿಕಾರಿಗಳು ಪ್ರಯತ್ನಿಸಿದರೂ ರೈತರೂ ನೂರಾರು ಲೀಟರ್ ಹಾಲನ್ನು ಚೆಲ್ಲಿದ್ದಾರೆ.

2 ದಿನಗಳ ಮಟ್ಟಿಗೆ ರಾಜ್ಯಾದ್ಯಂತ ಹಾಲು ನಿಷೇಧವನ್ನು ಘೋಷಿಸಿದ್ದೆವು. ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು. ಗುಜರಾತ್ ರೈತರಿಗೆ ಅಧಿಕಾರದಲ್ಲಿರುವವರನ್ನು ಬದಲಾಯಿಸುವ ಸಾಮರ್ಥ್ಯವಿದೆ, ಎಂದು ರೈತ ಮುಖಂಡರು ಹೇಳಿದ್ದಾರೆ.

(ಚಿತ್ರ: ಏಎನ್ಐ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೋವಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಗೆಲುವು, 10 ಸ್ಥಾನಕ್ಕೆ ತೃಪ್ತಿಪಟ್ಟ ಕಾಂಗ್ರೆಸ್
ಮಹಿಳೆ ಬಲಿ ಪಡೆದ ಚಿರತೆ ಕೊನೆಗೂ ಸೆರೆ, ದಾಳಿ ಮಾಡಿದ ಅದೇ ಸ್ಥಳದಲ್ಲೇ ಕಾರ್ಯಾಚರಣೆ