ಅಭಿವೃದ್ಧಿಯೊಂದಿಗೆ ಉಗ್ರರನ್ನು ಸದೆಬಡಿಯೋಣ: ಎರಡೂ ರಾಷ್ಟ್ರಗಳ ಪಣ

Published : Jul 05, 2017, 06:33 PM ISTUpdated : Apr 11, 2018, 12:44 PM IST
ಅಭಿವೃದ್ಧಿಯೊಂದಿಗೆ ಉಗ್ರರನ್ನು ಸದೆಬಡಿಯೋಣ: ಎರಡೂ ರಾಷ್ಟ್ರಗಳ ಪಣ

ಸಾರಾಂಶ

ಇಸ್ರೇಲ್​ ಪ್ರಧಾನಿ ನೆತಾನ್ಯಾಹು ಮಾತನಾಡಿ, ಭಾರತ-ಇಸ್ರೇಲ್​ ಜೊತೆಯಾಗಿ ಇತಿಹಾಸ ನಿರ್ಮಿಸಲಿವೆ. ಇಸ್ರೇಲ್ ಅನ್ನುವ ಪ್ರಬಲ ರಾಷ್ಟ್ರ ನೇರವು ಭಾರತಕ್ಕಿದೆ. ಅಲ್ಲಿನ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಇಸ್ರೇಲ್ ಸಾಥ್ ನೀಡಲಿದೆ.

ಜೆರುಸಲೆಮ್ (ಜು.05): ಐತಿಹಾಸಿಕ ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ  ವಿಮಾನಯಾನ, ಕೃಷಿ, ಬಾಹ್ಯಾಕಾಶ ಕ್ಷೇತ್ರಗಳು ಸೇರಿದಂತೆ ಒಟ್ಟು 7 ಒಪ್ಪಂದಗಳಿಗೆ ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರೊಂದಿಗೆ ಸಹಿ ಮಾಡಿದ್ದಾರೆ.

ದ್ವಿಪಕ್ಷೀಯ ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಎರಡೂ ರಾಷ್ಟ್ರಗಳ ಪ್ರಧಾನಿಗಳು, ಭಾರತ-ಇಸ್ರೇಲ್​ ಸಂಬಂಧವನ್ನು ಎತ್ತರಕ್ಕೆ ಕೊಂಡೊಯ್ಯುದರ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ನಮ್ಮ ಮಾರ್ಗಗಳು ಬೇರೆ ಬೇರೆಯಾದರೂ ನಂಬಿಕೆ ಒಂದೇ ಆಗಿದೆ. ಉಭಯ ರಾಷ್ಟ್ರಗಳಿಗೂ ಒಂದೇ ಗುರಿ ಇದ್ದು, ಎರಡೂ ದೇಶಗಳೂ ಒಂದೇ ರೀತಿಯ ಸಮಸ್ಯೆ ಎದುರಿಸುತ್ತಿವೆ. ಜಾಗತಿ ಸಮಸ್ಯೆಯನ್ನು ಒಗ್ಗಟ್ಟಾಗಿ ಎದುರಿಸಿ ಎರಡೂ ರಾಷ್ಟ್ರಗಳು ಅಭಿವೃದ್ಧಿ ಪಥದಲ್ಲಿ ಮುಂದುವರಿಯುವ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ಇಸ್ರೇಲ್ ಭೇಟಿ ಅತ್ಯಂತ ಮಹತ್ವದ್ದಾಗಿದ್ದು, ಇಲ್ಲಿಗೆ ಭೇಟಿ ನೀಡಿರುವ ಭಾರತದ ಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆ ನನಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ.  ಶೀಘ್ರವೇ ಭಾರತಕ್ಕೆ ಇಸ್ರೇಲ್​ ಪ್ರಧಾನಿ ನೆತಾನ್ಯಾಹು ಆಗಮಿಸಲಿದ್ದಾರೆ' ಎಂದು ತಿಳಿಸಿದ್ದಾರೆ.

ಪ್ರಬಲ ರಾಷ್ಟ್ರದ ನೆರವು ಭಾರತಕ್ಕಿದೆ.

ಇಸ್ರೇಲ್​ ಪ್ರಧಾನಿ ನೆತಾನ್ಯಾಹು ಮಾತನಾಡಿ, ಭಾರತ-ಇಸ್ರೇಲ್​ ಜೊತೆಯಾಗಿ ಇತಿಹಾಸ ನಿರ್ಮಿಸಲಿವೆ. ಇಸ್ರೇಲ್ ಅನ್ನುವ ಪ್ರಬಲ ರಾಷ್ಟ್ರ ನೇರವು ಭಾರತಕ್ಕಿದೆ. ಅಲ್ಲಿನ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಇಸ್ರೇಲ್ ಸಾಥ್ ನೀಡಲಿದೆ. ಎರಡೂ ದೇಶಗಳ ಸಂಬಂಧವನ್ನು ಜಗತ್ತೇ ತಿರುಗಿ ನೋಡುವಂತೆ ಮಾಡಿದೆ. ಒಂದು ಸಣ್ಣ ರಾಷ್ಟ್ರದ ಸಾಧನೆ ಇಡೀ ಜಗತ್ತಿಗೆ ಒಂದು ಅಧ್ಯಯ ಹಾಗೂ ಮಾರ್ಗದರ್ಶನವಾಗಿದೆ.ಪ್ರಧಾನಿ ಮೋದಿಯೊಂದಿಗೆ ಹಲವು ವಿಷಯಗಳನ್ನು ಚರ್ಚಿಸಲಾಗಿದೆ. ಒಟ್ಟಾಗಿ ಕೆಲಸ ಮಾಡಲು ಉಭಯ ದೇಶಗಳೂ ಬದ್ಧವಾಗಿದ್ದು, ಎರಡೂ ರಾಷ್ಟ್ರಗಳು ಉಗ್ರರ ವಿರುದ್ಧ ಹೋರಾಟ ಮಾಡುತ್ತೇವೆ' ಎಂದು ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಮೋದಿ ಈ ಸಂದರ್ಭದಲ್ಲಿ 26/11ರ ಮುಂಬೈ ಮಠದಲ್ಲಿ ಬದುಕುಳಿದ 10 ವರ್ಷದ ಬಾಲಕ ಮೋಷೆಯನ್ನು ಭೇಟಿ ಮಾಡಿದರು. ಭಯೋತ್ಪಾದಕರು ಮುಂಬೈ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಮೋಷೆ 4 ತಿಂಗಳ ಮಗುವಾಗಿತ್ತು.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದಲ್ಲೇ CPR ನೀಡಿ ಅಮೆರಿಕ ಯುವತಿಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್
ಪ್ರಧಾನಿ ಮಾಡಿದ್ದೆಲ್ಲಾ ತಪ್ಪು ಅನ್ನೋದು ತಪ್ಪು: ಕೈಗೆ ಮಾಜಿ ಕಾಂಗ್ರೆಸ್ಸಿಗನ ಸಲಹೆ