ಹಸುವಿನ ಚರ್ಮ ತೆಗೆದದ್ದಕ್ಕಾಗಿ ದಲಿತ ಯುವಕನ ಮೇಲೆ ಹಲ್ಲೆ

Published : Aug 15, 2017, 06:56 PM ISTUpdated : Apr 11, 2018, 12:56 PM IST
ಹಸುವಿನ ಚರ್ಮ ತೆಗೆದದ್ದಕ್ಕಾಗಿ ದಲಿತ ಯುವಕನ ಮೇಲೆ ಹಲ್ಲೆ

ಸಾರಾಂಶ

ಸತ್ತಿರುವ ಹಸುವಿನ ಚರ್ಮವನ್ನು ಹಳ್ಳಿಯ ಸಮೀಪದಲ್ಲಿಯೇ ತೆಗೆದಿದ್ದಕ್ಕಾಗಿ ದಲಿತ ಮಹಿಳೆ ಹಾಗೂ ಅವರ ಮಗನ ಮೇಲೆ ಮೇಲ್ವರ್ಗದ 15 ಮಂದಿ ಹೊಡೆದಿರುವ ಘಟನೆ ಆನಂದ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ಗುಜರಾತ್​ (ಆ.15): ಸತ್ತಿರುವ ಹಸುವಿನ ಚರ್ಮವನ್ನು ಹಳ್ಳಿಯ ಸಮೀಪದಲ್ಲಿಯೇ ತೆಗೆದಿದ್ದಕ್ಕಾಗಿ ದಲಿತ ಮಹಿಳೆ ಹಾಗೂ ಅವರ ಮಗನ ಮೇಲೆ ಮೇಲ್ವರ್ಗದ 15 ಮಂದಿ ಹೊಡೆದಿರುವ ಘಟನೆ ಆನಂದ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ಮೃತಪಟ್ಟ ಹಸುವಿಗಾಗಿಯೇ ಮೀಸಲಿಟ್ಟ ಜಾಗದಲ್ಲಿ ಚರ್ಮ ತೆಗೆಯದೇ ಹಳ್ಳಿಯ ಸಮೀಪದಲ್ಲೇ ಹಸುವಿನ ಚರ್ಮ ತೆಗೆಯಲು ಮುಂದಾದಾಗ  ಕೆಲವು ಸ್ಥಳೀಯರು ಆಕ್ಷೇಪವೆತ್ತಿದ್ದಾರೆ. ನಿಗದಿತ ಸ್ಥಳಕ್ಕೆ ತೆಗೆದುಕೊಂಡು ಹೋಗಲು ಸೂಚಿಸಿದ್ದಾರೆ. ಆಗ  ಆ ವ್ಯಕ್ತಿ ಮುಂದಿನ ಸಲ ಈ ರೀತಿ ಮಾಡುವುದಿಲ್ಲ ಎಂದು ಒಪ್ಪಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಸ್ಥಳೀಯರು ಆ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಆರೋಪಿಗಳ ಮೇಲೆ ಎಫ್’ಐಆರ್ ದಾಖಲಿಸಲಾಗಿದ್ದು ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ವರದಿಯಾಗಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಲವ್ ಮಾಡು, ಇಲ್ಲಾಂದ್ರೆ ಸಾಯ್ತೀನಿ: ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಕಿರುಕುಳ ಕೊಟ್ಟ ಖತರ್ನಾಕ್ ಲೇಡಿ
ಸರ್ಕಾರಿ ನೇಮಕಾತಿ ವಿಳಂಬ: ಮನನೊಂದು ಧಾರವಾಡ ರೈಲು ಹಳಿಗೆ ಸಿಲುಕಿ ಯುವತಿ ದಾರುಣ ಸಾವು!