ಬಾಗಪ್ಪ ಹರಿಜನ್ ಶೂಟೌಟ್ ಪ್ರಕರಣ: ಆರು ಮಂದಿ ಬಂಧನ

By Suvarna Web DeskFirst Published Aug 15, 2017, 6:40 PM IST
Highlights

* ವಿಜಯಪುರದಲ್ಲಿ ಬಾಗಪ್ಪ ಹರಿಜನ್ ಮೇಲೆ ಶೂಟೌಟ್ ಪ್ರಕರಣ

* ರಮೇಶ ಬಾಬುರಾವ್ ಹಡಪದ, ಭೀಮು ಹರಿಜನ್, ರಜಾಕ್ ಮಮ್ಮುಲಾಲ್ ಕಾಂಬಳೆ, ನಾಮದೇವ ದೊಡಮನಿ, ಮಲ್ಲೇಶಪ್ಪ ಬಿಂಜಗೇರಿ ಬಂಧಿತ ಆರೋಪಿಗಳು

* ಬಸವರಾಜ್ ಹರಿಜನ್ ಹತ್ಯೆ ಪ್ರತೀಕಾರವಾಗಿ ಶೂಟೌಟ್ ನಡೆಸಿರುವುದಾಗಿ ಹೇಳಿಕೆ

* ಎಎಸ್ಪಿ ಶಿವಕುಮಾರ್ ಗುಣಾರಿ ನೇತೃತ್ವದಲ್ಲಿ 2 ತಂಡಗಳಾಗಿ ನಡೆದ ಕಾರ್ಯಾಚರಣೆ

* ಶೂಟೌಟ್ ನಡೆದು 7 ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು.

* ಪ್ರಕರಣ ಭೇದಿಸಿದ ಅಧಿಕಾರಿಗಳಿಗೆ ಅಭಿನಂದಿಸಿದ ಎಸ್ಪಿ ಕುಲದೀಪ ಜೈನ್

ವಿಜಯಪುರ(ಆ. 15): ಬಾಗಪ್ಪ ಹರಿಜನ್ ಮೇಲೆ ನಡೆದ ಶೂಟೌಟ್ ಪ್ರಕರಣವನ್ನು ಭೇದಿಸುವಲ್ಲಿ ಇಲ್ಲಿಯ ಪೊಲೀಸರು ಯಶಸ್ವಿಯಾಗಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ರಮೇಶ್ ಬಾಬುರಾವ್ ಹಡಪದ, ಭೀಮು ಹರಿಜನ್, ರಜಾಕ್ ಮಮ್ಮುಲಾಲ್ ಕಾಂಬಳೆ, ನಾಮದೇವ ದೊಡಮನಿ ಮತ್ತು ಮಲ್ಲೇಶಪ್ಪ ಬಿಂಜಗೇರಿ ಬಂಧಿತ ಆರೋಪಿಗಳು. ಬಸವರಾಜ್ ಹರಿಜನ್ ಹತ್ಯೆಗೆ ಪ್ರತೀಕಾರವಾಗಿ ಶೂಟೌಟ್ ನಡೆಸಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಪ್ರಕರಣ ಭೇದಿಸಲು ಎಎಸ್ಪಿ ಶಿವಕುಮಾರ್ ಗುಣಾರಿ ನೇತೃತ್ವದಲ್ಲಿ 2 ತಂಡಗಳನ್ನು ನೇಮಿಸಲಾಗಿತ್ತು. ಇದೇ ವೇಳೆ, ಪ್ರಕರಣ ಭೇದಿಸಿದ ಅಧಿಕಾರಿಗಳಿಗೆ ಎಸ್ಪಿ ಕುಲದೀಪ ಜೈನ್​ ಅಭಿನಂದಿಸಿದ್ದಾರೆ.

click me!