ಸ್ವದೇಶೀ ನಿರ್ಮಿತ ವಿಶ್ವದ ಅತ್ಯುತ್ತಮ ಸಮರ ನೌಕೆ ಮೋರ್ಮುಗಾವೋ ಭಾರತದ ಬತ್ತಳಿಕೆಗೆ ಸೇರ್ಪಡೆ

Published : Sep 17, 2016, 03:17 PM ISTUpdated : Apr 11, 2018, 12:51 PM IST
ಸ್ವದೇಶೀ ನಿರ್ಮಿತ ವಿಶ್ವದ ಅತ್ಯುತ್ತಮ ಸಮರ ನೌಕೆ ಮೋರ್ಮುಗಾವೋ ಭಾರತದ ಬತ್ತಳಿಕೆಗೆ ಸೇರ್ಪಡೆ

ಸಾರಾಂಶ

ಮುಂಬೈ(ಸೆ. 17): ಭಾರತೀಯ ನೌಕಾಪಡೆಗೆ ಮತ್ತಷ್ಟು ಆನೆಬಲ ಬಂದಿದೆ. ಮುಂಬೈನ ಮಡಗಾಂವ್​ ಬಂದರಿನಲ್ಲಿ ಮೊದಲ ಬಾರಿಗೆ ಮೋರ್ಮುಗಾವೋ ಯುದ್ಧನೌಕೆ ಸೇರ್ಪಡೆಯಾಗಿದೆ. ಇಸ್ರೇಲ್ ತಂತ್ರಜ್ಞಾನದ ಸೂಕ್ಷ್ಮ ನಿಗಾ ಕಾರ್ಯಾಚರಣೆ ವ್ಯವಸ್ಥೆ ಇರುವ ಈ  ಐಎನ್​ಎಸ್​ ಮೋರ್ಮುಗಾವೋಗೆ ನೌಕಾಪಡೆ ಮುಖ್ಯಸ್ಥ ಸುನೀಲ್​ ಲಂಬಾ ಚಾಲನೆ ನೀಡಿದ್ದಾರೆ. ವಿಶಾಖಪಟ್ಟಣಂ ದರ್ಜೆಯ ನೌಕೆಗಳ ಸಾಲಿನಲ್ಲಿ ನಿರ್ಮಾಣವಾಗಿದ್ದು ವಿಶ್ವದ ಅತ್ಯುತ್ತಮ ಯುದ್ಧನೌಕೆಗಳಲ್ಲೊಂದೆನಿಸಿದೆ.

INS ಮೋರ್ಮುಗಾವೋ ವಿಶೇಷತೆ
* ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸ್ವದೇಶಿಯಾಗಿ ನಿರ್ಮಾಣ.
* ಭಾರತದಲ್ಲಿ ನಿರ್ಮಾಣವಾದ 2ನೇ ಕ್ಷಿಪಣಿ ನಾಶಕ ಯುದ್ಧನೌಕೆ ಇದು
* ವಿಶ್ವದ ಅತ್ಯುತ್ತಮ ಯುದ್ಧನೌಕೆಗಳ ಸಾಲಿನಲ್ಲಿ...
* 7,300 ಟನ್ ಸಾಮರ್ಥ್ಯ
* ಗಂಟೆಗೆ ಸುಮಾರು 56 ಕಿಲೋ ಮೀಟರ್ ವೇಗದಲ್ಲಿ ಚಲಿಸಬಲ್ಲುದು
* ಭೂಮಿಯಿಂದ ಭೂಮಿಗೆ, ಭೂಮಿಯಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಗಳು ಹಾಗೂ ಆ್ಯಂಟಿ-ಸಬ್'ಮರೀನ್ ರಾಕೆಟ್ ಲಾಂಚರ್'ಗಳು, ಯುದ್ಧದ ಹೆಲಿಕಾಪ್ಟರ್'ಗಳು ಈ ನೌಕೆಯ ಬತ್ತಳಿಕೆಯಲ್ಲಿರುತ್ತವೆ.
* ಇಸ್ರೇಲ್ ತಂತ್ರಜ್ಞಾನದ ಸೂಕ್ಷ್ಮ ನಿಗಾ ಕಾರ್ಯಾಚರಣೆ ವ್ಯವಸ್ಥೆ ಇದೆ
* ಅಪಾಯಕಾರಿ ಮುನ್ಸೂಚನೆ ನೀಡುವ ರಾಡಾರ್  ಇದೆ
* 100 ಕಿ.ಮೀ. ದೂರದವರೆಗೆ ಗುರಿ ಇಟ್ಟು ನಾಶ ಮಾಡುವ ಸಾಮರ್ಥ್ಯ ಹೊಂದಿದೆ
* 29,700 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದೆ
* 2011ರಲ್ಲಿ ಈ ನೌಕೆಯ ನಿರ್ಮಾಣಕ್ಕೆ ಒಪ್ಪಂದವಾಗಿತ್ತು.

ಇನ್ನು ಈ ಮರ್ಮಗೋವಾ ಯುದ್ಧನೌಕೆಯಲ್ಲಿ 50ಮಂದಿ ಅಧಿಕಾರಿಗಳು ಹಾಗೂ 250 ಮಂದಿ ನೌಕಾ ಸಿಬ್ಬಂದಿ ಇರುತ್ತಾರೆ. ಸ್ವಯಂಚಾಲಿತ ಕ್ಷಿಪಣಿ , ಆಕಾಶದಲ್ಲಿನ ಗುರಿಯನ್ನು ಹೊಡೆದುರುಳಿಸುವ ಕ್ಷಿಪಣಿಗಳು ಈ ಯುದ್ಧನೌಕೆಯಲ್ಲಿರಲಿವೆ.  ಇಂತಹುದೇ ನಾಲ್ಕು  ಕ್ಷಿಪಣಿ ನಾಶಕ ಯುದ್ಧ ನೌಕೆಗಳನ್ನು ನಿರ್ಮಿಸಲು ಭಾರತೀಯ ನೌಕಾಪಡೆ ಉದ್ದೇಶಿಸಿದೆ. ಈ ನೌಕೆ 2020ರ ವೇಳೆಗೆ ಸೇವೆಗೆ ಲಭ್ಯವಾಗಲಿದೆ. ಇದಲ್ಲದೆ 2020-2024ರ ವೇಳೆಗೆ ಈ ರೀತಿಯ ಇನ್ನೂ ನಾಲ್ಕು ನೌಕೆಗಳು ತಯಾರಾಗಲಿವೆ.  ಸರಕಾರೀ ಸ್ವಾಮ್ಯದ ಮಜಗಾಂವ್ ಡಾಕ್ ಶಿಪ್'ಬ್ಯುಲ್ಡರ್ಸ್ ಲಿ.(ಎಂಡಿಎಲ್) ಸಂಸ್ಥೆಯು ಈ ನೌಕೆಯನ್ನು ನಿರ್ಮಿಸುತ್ತಿದೆ.

- ವರುಣ್​ ಕಂಜರ್ಪಣೆ, ನ್ಯೂಸ್​ ಡೆಸ್ಕ್​, ಸುವರ್ಣ ನ್ಯೂಸ್​

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌