ಕಾವೇರಿ ಗಲಭೆಯಲ್ಲಿ ಆರೆಸ್ಸೆಸ್ ಕೈವಾಡ: ಗೃಹಮಂತ್ರಿಯನ್ನು ಸಮರ್ಥಿಸಿದ ರಾಯರೆಡ್ಡಿ

By Internet DeskFirst Published Sep 17, 2016, 2:57 PM IST
Highlights

ಕೊಪ್ಪಳ (ಸೆ.17): ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ನಡೆದ ಗಲಭೆಗಳಲ್ಲಿ ಆರೆಸ್ಸೆಸ್ ಕೈವಾಡದ ಬಗ್ಗೆ ಗೃಹಮಂತ್ರಿ ಡಾ, ಜಿ.ಪರಮೇಶ್ವರ್ ಹೇಳಿಕೆಯನ್ನು ಸಚಿವ ಬಸವರಾಜ ರಾಯರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.

ಗಲಭೆ ಕುರಿತು ಗೃಹ ಸಚಿವರಿಗೆ ಗುಪ್ತಚರ ವರದಿ ಬಂದಿದೆ, ಗೃಹ ಸಚಿವರು ಸುಖಾ ಸುಮ್ಮನೆ ಹೇಳಿಕೆ ನೀಡಿಲ್ಲ, ಅವರ ಬಳಿ ಸಾಕ್ಷ್ಯ ಇದೆ ಎಂದು ರಾಯರೆಡ್ಡಿ ಹೇಳಿದ್ದಾರೆ.

Latest Videos

ಸರ್ಕಾರ ಅಸ್ಥಿರಗೊಳಿಸಲು ಷಡ್ಯಂತ್ರ ನಡೆದಿರಬಹುದು ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. 

click me!