ರಾಜಕಾಲುವೆ ಒತ್ತುವರಿಯಾಗಿದ್ದರೆ ಆಸ್ಪತ್ರೆ ಒಡೆದು ಹಾಕಲಿ: ಶಾಮನೂರು ಶಿವಶಂಕರಪ್ಪ

Published : Sep 17, 2016, 03:16 PM ISTUpdated : Apr 11, 2018, 12:48 PM IST
ರಾಜಕಾಲುವೆ ಒತ್ತುವರಿಯಾಗಿದ್ದರೆ ಆಸ್ಪತ್ರೆ ಒಡೆದು ಹಾಕಲಿ: ಶಾಮನೂರು ಶಿವಶಂಕರಪ್ಪ

ಸಾರಾಂಶ

ಬೆಂಗಳೂರು (ಸೆ.17): ಆರ್​.ಆರ್​. ನಗರದಲ್ಲಿ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಎಸ್.​ಎಸ್ ಆಸ್ಪತ್ರೆ ಮಾಲಕ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಕಾನೂನು ಪ್ರಕಾರವೇ ನಾವು ಭೂಮಿ ಗುತ್ತಿಗೆ ಪಡೆದು ಆಸ್ಪತ್ರೆ ಕಟ್ಟಲಾಗಿದೆ ಎಂದು ಹೇಳಿದ್ದಾರೆ.

ಬಿಡಿಎ ಕೊಟ್ಟಿರುವ ಸೈಟ್​ನಲ್ಲಿ ಆಸ್ಪತ್ರೆ ಕಟ್ಟಲಾಗಿದೆ ಎಂದಿರುವ ಶಾಮನೂರು, ಅಕ್ರಮ ನಡೆದಿದ್ದರೆ ಎಸ್​.ಎಸ್​. ಆಸ್ಪತ್ರೆ ಒಡೆದು ಹಾಕಲಿ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರವೇ ನಮಗೆ 2 ಎಕರೆ ಜಮೀನು ನೀಡಿತ್ತು; ಕಾನೂನು ಪ್ರಕಾರವೇ 30 ವರ್ಷಗಳ ಅವಧಿಗೆ ಸರ್ಕಾರದಿಂದ ಭೂಮಿ ಗುತ್ತಿಗೆ ಪಡೆದಿದ್ದೇವೆ.  ಈಗಾಗಲೇ 19 ವರ್ಷ ಆಗಿದ್ದು ಇನ್ನೂ 11 ವರ್ಷ ಇದೆ  ಎಂದು ಶಾಮನೂರು ಹೇಳಿದ್ದಾರೆ.

ಎಸ್.​ಎಸ್​.ಆಸ್ಪತ್ರೆಯಿಂದ ರಾಜಕಾಲುವೆ ಒತ್ತುವರಿಯಾಗಿದೆ ಎಂಬ ಆರೋಪ  ಸರಿಯಲ್ಲ, ನಾವು ಯಾವುದೇ ರೀತಿಯ ಅಕ್ರಮ ಮಾಡಿಲ್ಲ, ಈ ಬಗ್ಗೆ ನಮ್ಮ ಇಂಜಿನಿಯರ್​ಗಳ ಜೊತೆ ಮಾತನಾಡಿದ್ದೇನೆ ಎಂದು ಹೇಳಿರುವ ಸಚಿವ ಎಸ್​.ಎಸ್​.ಮಲ್ಲಿಕಾರ್ಜುನ,  ಇದು ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಗಿಮಿಕ್ ಎಂದು ಹೇಳಿದ್ದಾರೆ.

ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಸ್​.ಎಸ್​.ಮಲ್ಲಿಕಾರ್ಜುನ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌