
ಪಟನಾ: ಬಿಹಾರ ವಿಧಾನ ಪರಿಷತ್ನಲ್ಲಿ ಗುರುವಾರ ಕಾಂಗ್ರೆಸ್ಗೆ ಭಾರೀ ಹಿನ್ನಡೆಯಾಗಿದ್ದು, ಪಕ್ಷ ವಿಭಜನೆಯಾಗಿದೆ. ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಅಶೋಕ್ ಚೌಧರಿ ಸೇರಿದಂತೆ, ಇತರ ಮೂವರು ವಿಧಾನ ಪರಿಷತ್ ಸದಸ್ಯರು, ಆಡಳಿತಾರೂಢ ಪಕ್ಷ ಜೆಡಿಯು ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ.
ಅಶೋಕ್ ಚೌಧರಿ, ದಿಲೀಪ್ ಚೌಧರಿ, ರಾಮಚಂದ್ರ ಭಾರತಿ, ತನ್ವೀರ್ ಅಖ್ತರ್ ಬುಧವಾರ ಅಧಿಕೃವಾಗಿ ತಮ್ಮನ್ನು ಜೆಡಿಯು ಎಂಎಲ್ಸಿಗಳಾಗಿ ಗುರುತಿಸುವಂತೆ ಪರಿಷತ್ತಿನ ಸಭಾಪತಿ ಹಾರೂನ್ ರಶೀದ್ಗೆ ವಿನಂತಿಸಿದ್ದರು. ಅರ್ಜಿ ಗುರುವಾರ ಸ್ವೀಕರಿಸಲ್ಪಟ್ಟಿದೆ. ಸದನದಲ್ಲಿ ಆರು ಕಾಂಗ್ರೆಸ್ ಎಂಎಲ್ಸಿಗಳಿದ್ದರು. ನಾಲ್ವರನ್ನೂ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕೌಕಾಬ್ ಖಾದ್ರಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.