
ವಿಜಯಪುರ(ಸೆ.20): ಗುಮ್ಮಟ ನಗರಿ ವಿಜಯಪುರದಲ್ಲಿ ಕೆಲ ದಿನಗಳ ಬಳಿಕ ಮತ್ತೆ ಗುಂಡಿನ ಮೊರೆತ ಕೇಳಿ ಬಂದಿದೆ. ನಗರದ ಶಾಸ್ತ್ರಿ ಕಾಲೋನಿಯಲ್ಲಿ ಮಹಿಳೆಯನ್ನ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದೆ. ಆದ್ರೆ ಅದೃಷ್ಠವಶಾತ್ ಮುಮ್ತಾಜ್ ಖಾನ್ ಎನ್ನುವ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಮುಮ್ತಾಜ್ ಖಾನ್ ಮೇಲೆ ರಹಿಂ ನಗರದ ಸಮೀರ್ ಪಠಾಣ ಎಂಬಾತ 2 ಸುತ್ತು ಫೈರಿಂಗ್ ನಡೆಸಿದ್ದಾನೆ.ಮನೆ ಎದುರು ಬಂದ ಸಮೀರ್ ಪಠಾಣ ಇದ್ದಕ್ಕಿಂತೆ ಮುಮ್ತಾಜ್ ಮೇಲೆ ಪೈರಿಂಗ್ ಮಾಡಿದ್ದಾನೆ. ಆದ್ರೆ ಆಕೆ ಮನೆ ಒಳಗೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾಳೆ. ಅಷ್ಟಕ್ಕೂ ಈ ಘಟನೆಗೆ ಮುಖ್ಯ ಕಾರಣ ಅಂದ್ರೆ, ಮುಮ್ತಾಜಳ ಪುತ್ರ ಸಲ್ಮಾನ್ ಖಾನ್ ಫೈರಿಂಗ್ ನಡೆಸಿದ ಸಮೀರ್ ಪಠಾಣನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಹೀಗಾಗಿ ಕುಡಿದ ಮತ್ತಲ್ಲಿ ಬಂದ ಸಮೀರ್ ಸಲ್ಮಾನ್ ತಾಯಿ ಮುಮ್ತಾಜ್ ಮೇಲೆ ಫೈರಿಂಗ್ ಮಾಡಿ ರಾರಿಯಾಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿರುವ ಗಾಂಧಿ ಚೌಕ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇನ್ನು ಪೈರಿಂಗ್ ನಡೆದ ಸ್ಥಳದಲ್ಲಿ 2 ಗುಂಡಿನ ಕ್ಯಾಪ್ ಗಳು ಮತ್ತೆಯಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.