
ನವದೆಹಲಿ[ಜು. 29] ಈ ಪುಣ್ಯಾತ್ಮನಿಗೆ ಮದ್ಯದ ಅಮಲು, ನಿಶೆ ತಲೆಗೆ ಏರಿಹೋಗಿತ್ತು, ಅಮಲಿನಲ್ಲಿ ಇದ್ದವ ತನಗೆ ಕಚ್ಚಿದ ಹಾವನ್ನೇ ಕಚ್ಚಿ ಕಚ್ಚಿ ತುಂಡರಿಸಿದ್ದಾನೆ.
ಹಾವಿಗೆ ಕಚ್ಚಿದ ಉತ್ತರ ಪ್ರದೇಶಸದ ಎತಾಹ್ ದ ಅಸ್ರೌಲಿ ಗ್ರಾಮದ ರಾಜಕುಮಾರ್ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.ಈ ಘಟನೆ ಕುರಿತಾಗಿ ಈಗ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಆ ವ್ಯಕ್ತಿಯ ತಂದೆ ಬಾಬು ರಾಮ್ 'ನನ್ನ ಮಗ ಕುಡಿದಿದ್ದನು. ಹಾವು ನಮ್ಮ ಮನೆಗೆ ಪ್ರವೇಶಿಸಿ ಅವನನ್ನು ಕಚ್ಚಿತು. ಅಮಲಿನಲ್ಲಿದ್ದ ಆತ ಹಾವನ್ನೇ ಕಚ್ಚಿ-ಕಚ್ಚಿ ತುಂಡು ಮಾಡಿದ.
ಕಿಚನ್ನಲ್ಲಿ ಕಾಳಿಂಗ ಸರ್ಪ! ವಿಡಿಯೋನೇ ನೋಡಕ್ಕಾಗಲ್ಲ, ಮುಂದಿದ್ರೆ ಏನ್ ಗತಿಯೋ!
ಅವನಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ಧೇನೆ ಎಂದು ಅಳಲು ತೋಡಿಕೊಂಡರು. ಘಟನೆಯ ನಂತರ ರಾಜ್ಕುಮಾರ್ ಅವರ ಕುಟುಂಬವು ಹಾವನ್ನು ಅಂತ್ಯಕ್ರಿಯೆ ಮಾಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.