
ದಿಲ್ಲಿ ಮೆಟ್ರೋ ಯೆಲ್ಲೋ ಲೈನ್ನಲ್ಲಿ ನಿನ್ನೆ ಸೋಮವಾರ ಪ್ರಯಾಣಿಸುತ್ತಿದ್ದವರಿಗೆ ಜೀವವೇ ಬಾಯಿಗೆ ಬಂದಂತಹ ಭಯಾನಕ ಅನುಭವ ಉಂಟಾದ ಘಟನೆ ವರದಿಯಾಗಿದೆ. ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ದಿಲ್ಲಿ ಮೆಟ್ರೋ ಎರಡು ಸ್ಟೇಶನ್ಗಳ ನಡುವೆ ಚಲಿಸುತ್ತಿದ್ದಾಗ ಅದರ ಒಂದು ಬಾಗಿಲು ತೆರೆದುಕೊಂಡೇ ಇದ್ದದ್ದು ಪ್ರಯಾಣಿಕರಲ್ಲಿ ತೀವ್ರ ಭಯ, ಆತಂಕವನ್ನು ಉಂಟುಮಾಡಿತು. ಈ ಘಟನೆ ನಡೆದದ್ದು ಸೋಮವಾರ ರಾತ್ರಿ 10 ಗಂಟೆಯ ವೇಳೆ. ಆಗ ಮೆಟ್ರೋ ರೈಲು ಚೌರಿ ಬಜಾರ್ ಮತ್ತು ಕಶ್ಮೇರೆ ಗೇಟ್ ಸ್ಟೇಶನ್ ನಡುವೆ ಓಡುತ್ತಿತ್ತು. ಈ ಮಾರ್ಗವು ಉತ್ತರ ದಿಲ್ಲಿಯನ್ನು ಗುರುಗ್ರಾಮದೊಂದಿಗೆ ಜೋಡಿಸುತ್ತದೆ. 2014ರ ಜುಲೈ ತಿಂಗಳಲ್ಲೂ ಒಮ್ಮೆ ಇದೇ ರೀತಿಯ ಘಟನೆ ಸಂಭವಿಸಿತ್ತು. ಆಗ ಮೆಟ್ರೋ ರೈಲು ತೋರ್ನೀ ಮತ್ತು ಅರ್ಜನ್ಗಢ ನಡುವೆ ಓಡುತ್ತಿತ್ತು ಮತ್ತು ಯೆಲ್ಲೋ ಲೈನ್ನಲ್ಲಿ ಅದರ ಎಲ್ಲ ಬಾಗಿಲುಗಳು ತೆರೆದುಕೊಂಡಿದ್ದವು. ಈ ಘಟನೆಯ ಬೆನ್ನಿಗೇ ಸುರಕ್ಷೆಯ ಲೋಪಕ್ಕಾಗಿ ಮೆಟ್ರೋ ಚಾಲಕನನ್ನು ಅಮಾನತು ಮಾಡಲಾಗಿತ್ತು. ದಿಲ್ಲಿ ಮೆಟ್ರೋದ ಯೆಲ್ಲೋ ಲೈನ್ ಗುರ್ಗಾಂವ್ನ ಹುದಾ ನಗರ ಕೇಂದ್ರವನ್ನು ಉತ್ತರ ದಿಲ್ಲಿಯ ಸಮಯ್ಪುರ್ ಬದ್ಲಿ ಜತೆಗೆ ಜೋಡಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.