ಮೈಸೂರು (ಸೆ. 27): ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಕಾವಾಡಿ, ಮಾವುತ ಕುಟುಂಬಗಳಿಗೆ ಮೈಸೂರು ಜಿಲ್ಲಾಡಳಿತದಿಂದ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
ಉಸ್ತುವಾರಿ ಸಚಿವ ಮಹದೇವಪ್ಪ, ಸಚಿವ ಮಹದೇವ ಪ್ರಸಾದ್ ಭಾಗಿಯಾಗಿದ್ದರು. ಈ ವೇಳೆ ಕಾವಾಡಿ, ಮಾವುತ ಕುಟುಂಬಕ್ಕೆ ಸಚಿವರು ಊಟ ಬಡಿಸಿದ್ದು ವಿಶೇಷವಾಗಿತ್ತು.
ನಗರ ಪೊಲೀಸ್ ಆಯುಕ್ತ ದಯಾನಂದ್, ಜಿಲ್ಲಾಧಿಕಾರಿ ರಂದೀಪ್, ಮೇಯರ್ ಭೈರಪ್ಪ, ಶಾಸಕ ಸೋಮಶೇಖರ್ ಉಪಸ್ಥಿತರಿದ್ದರು.
ಮಾವುತ ಹಾಗೂ ಕಾವಾಡಿಗರ ಜತೆಯಲ್ಲೇ ಕುಳಿತು ಸಚಿವರು ಉಪಹಾರ ಸೇವಿಸಿದರು.