ದಸರಾಗೆ ಭರ್ಜರಿ ಸಿದ್ಧತೆ

By Internet DeskFirst Published Sep 27, 2016, 11:34 AM IST
Highlights

ಮೈಸೂರು (ಸೆ. 27): ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದೆ.  ಕಾವಾಡಿ, ಮಾವುತ ಕುಟುಂಬಗಳಿಗೆ ಮೈಸೂರು ಜಿಲ್ಲಾಡಳಿತದಿಂದ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

ಉಸ್ತುವಾರಿ ಸಚಿವ ಮಹದೇವಪ್ಪ, ಸಚಿವ ಮಹದೇವ ಪ್ರಸಾದ್ ಭಾಗಿಯಾಗಿದ್ದರು. ಈ ವೇಳೆ ಕಾವಾಡಿ, ಮಾವುತ ಕುಟುಂಬಕ್ಕೆ  ಸಚಿವರು ಊಟ ಬಡಿಸಿದ್ದು ವಿಶೇಷವಾಗಿತ್ತು.

Latest Videos

ನಗರ ಪೊಲೀಸ್ ಆಯುಕ್ತ ದಯಾನಂದ್, ಜಿಲ್ಲಾಧಿಕಾರಿ ರಂದೀಪ್, ಮೇಯರ್ ಭೈರಪ್ಪ, ಶಾಸಕ ಸೋಮಶೇಖರ್ ಉಪಸ್ಥಿತರಿದ್ದರು.

ಮಾವುತ ಹಾಗೂ ಕಾವಾಡಿಗರ ಜತೆಯಲ್ಲೇ ಕುಳಿತು ಸಚಿವರು ಉಪಹಾರ ಸೇವಿಸಿದರು.

click me!