ಐಟಿ ಬಲೆಯಲ್ಲಿ ಸಿಲುಕಿರುವ ಪವರ್ ಮಿನಿಸ್ಟರ್ ಇಂದು ಕೋರ್ಟ್ಗೆ ಹಾಜರಾಗ್ತಾರಾ..? ಆದಾಯಕ್ಕೂ ಮೀರಿ ಆದಾಯ ಗಳಿಕೆ ಹಾಗು ಐಟಿ ದಾಳಿ ವೇಳೆ ಸಾಕ್ಷ್ಯ ನಾಶದ ಆರೋಪದಲ್ಲಿ ಡಿಕೆಶಿ ವಿರುದ್ಧ ಮೂರು ದೂರುಗಳು ದಾಖಲಾಗಿದೆ. ಆರ್ಧಿಕ ಅಪರಾಧಗಳ ನ್ಯಾಯಾಲಯ ಸಮನ್ಸ್ ನೀಡಿದ್ದು ಇಂದು ಕೋರ್ಟ್ಗೆ ಡಿಕೆಶಿ ಹಾಜರಾಗಬೇಕಿದೆ.
ಬೆಂಗಳೂರು (ಮಾ.22): ಐಟಿ ಬಲೆಯಲ್ಲಿ ಸಿಲುಕಿರುವ ಪವರ್ ಮಿನಿಸ್ಟರ್ ಇಂದು ಕೋರ್ಟ್ಗೆ ಹಾಜರಾಗ್ತಾರಾ..? ಆದಾಯಕ್ಕೂ ಮೀರಿ ಆದಾಯ ಗಳಿಕೆ ಹಾಗು ಐಟಿ ದಾಳಿ ವೇಳೆ ಸಾಕ್ಷ್ಯ ನಾಶದ ಆರೋಪದಲ್ಲಿ ಡಿಕೆಶಿ ವಿರುದ್ಧ ಮೂರು ದೂರುಗಳು ದಾಖಲಾಗಿದೆ. ಆರ್ಧಿಕ ಅಪರಾಧಗಳ ನ್ಯಾಯಾಲಯ ಸಮನ್ಸ್ ನೀಡಿದ್ದು ಇಂದು ಕೋರ್ಟ್ಗೆ ಡಿಕೆಶಿ ಹಾಜರಾಗಬೇಕಿದೆ.
ಆಗಸ್ಟ್ 3, 2017ರಂದು ಐಟಿ ಅಧಿಕಾರಿಗಳು ಈಗಲ್ಟನ್ ರೆಸಾರ್ಟ್, ಡಿಕೆಶಿವಕುಮಾರ್ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಡಿಕೆಶಿ ಅವರ 400 ಕೋಟಿ ಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಅಲ್ಲದೇ ಈಗಲ್ಟನ್ ರೆಸಾರ್ಟ್ ನಲ್ಲಿ ಪ್ರಮುಖವಾದ ದಾಖಲೆಯನ್ನು ಐಟಿ ಅಧಿಕಾರಿಗಳ ಮುಂದೆಯೇ ಡಿಕೆ ಶಿವಕುಮಾರ್ ನಾಶಮಾಡಿದ್ದರು. ಹರಿದ ಚೂರುಗಳನ್ನ ಜೋಡಿಸಿ ತನಿಖೆ ನಡೆಸಿದ ಐಟಿ ಅಧಿಕಾರಿಗಳು ಅದರಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಿದ್ದು ಬಯಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದಐಟಿ ಉಪ ನಿರ್ದೇಶಕ ಸುನೀಲ್ ಗೌತಮ್ ಆರ್ಥಿಕ ವ್ಯವಹಾರಗಳ ನ್ಯಾಯಾಲಯಕ್ಕೆ ಮೂರು ದೂರುಗಳನ್ನು ನೀಡಿದ್ದರು.
ಐಟಿ ಅಧಿಕಾರಿಗಳ ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿತ್ತು. ಸದಾಶಿವನಗರದ ಮನೆಯಲ್ಲಿ 7.42 ಕೋಟಿ, ದೆಹಲಿಯ ಸಫ್ದರ್ಜಂಗ್ ಮನೆಯಲ್ಲಿ 7.45 ಕೋಟಿ, ಡಿಕೆಶಿಗೆ ಸೇರಿದ ವಿವಿಧ ಫ್ಲಾಟ್ಗಳಲ್ಲಿ 10.85ಕೋಟಿ, ಧವನಂ ಕಚೇರಿಯಲ್ಲಿ 9.78ಕೋಟಿ, ಡಿಕೆಶಿ ಅಕೌಂಟ್ನಲ್ಲಿ 73 ಕೋಟಿ ಪತ್ತೆಯಾಗಿತ್ತು. ಈ ಸಂಬಂಧ ಐಟಿ ವಿಚಾರಣೆ ವೇಳೆಯೂ ಡಿಕೆಶಿ ಅವರಿಂದ ಸರಿಯಾದ ಉತ್ತರ ಸಿಕ್ಕಿರಲಿಲ್ಲ. ಹೀಗಾಗಿ ಖುದ್ದು ಐಟಿ ನೀಡಿದ್ದ ದೂರಿನ ಅನ್ವಯ ಕೋರ್ಟ್ ಮಾರ್ಚ್ 22 ರಂದು ಕೋರ್ಟ್ಗೆ ಹಾಜರಾಗಿ ಉತ್ತರ ನೀಡುವಂತೆ ಸೂಚಿಸಿತ್ತು.
ಇಂದು ಖುದ್ದಾಗಿ ಡಿಕೆಶಿವಕುಮಾರ್ ಕೋರ್ಟ್ ಕಟಕಟೆಯಲ್ಲಿ ನಿಂತು ಉತ್ತರ ನೀಡಬೇಕಿದೆ. ಆದ್ರೇ, ಪವರ್ ಮಿನಿಸ್ಟರ್ ಹಾಜರಾಗ್ತಾರಾ..? ಅಥವಾ ಕೋರ್ಟ್ಗೆ ತಮ್ಮ ವಕೀಲರನ್ನು ಕಳುಹಿಸಿ ಕಾಲಾವಕಾಶ ಪಡೆದುಕೊಳ್ತಾರಾ..? ಅನ್ನೋ ಪ್ರಶ್ನೆಗೆ ಡಿಕೆಶಿ ಅವರಿಂದ ಯಾವುದೇ ಸುಳಿವು ಸಿಕ್ಕಿಲ್ಲ. ಚುನಾವಣೆ ಮುಗಿಯವವರೆಗೂ ಕೋರ್ಟ್ಗೆ ಹಾಜರಾಗದೇ ಬೀಸೋ ದೊಣ್ಣೆಯಿಂದ ಪವರ್ ಮಿನಿಸ್ಟರ್ ತಪ್ಪಿಸಿಕೊಳ್ಳೋ ಪ್ಲಾನ್ ಮಾಡಿದ್ದಾರೆ ಅನ್ನೋ ಮಾತುಗಳೂ ಕೂಡ ಕೇಳಿ ಬಂದಿವೆ .