ಗೇರ್ ಬದಲಿಸಿದ್ದ ’ವಾಯು’ ಮತ್ತೆ ಗುಜರಾತ್‌ಗೆ ಯೂ ಟರ್ನ್!

Published : Jun 15, 2019, 11:24 AM ISTUpdated : Jun 15, 2019, 11:27 AM IST
ಗೇರ್ ಬದಲಿಸಿದ್ದ ’ವಾಯು’ ಮತ್ತೆ ಗುಜರಾತ್‌ಗೆ ಯೂ ಟರ್ನ್!

ಸಾರಾಂಶ

ಒಮಾನ್‌ ಬದಲು ಮತ್ತೆ ಗುಜರಾತ್‌ ಕರಾವಳಿಯತ್ತ ‘ವಾಯು’ ಮಾರುತ!| ಸೋಮವಾರ ಕಛ್‌ಗೆ ಅಪ್ಪಳಿಸುವ ಸಾಧ್ಯತೆ: ಅಪಾಯವಿಲ್ಲ

ನವದೆಹಲಿ[ಜೂ.15]: ಒಮಾನ್‌ನತ್ತ ಪಥ ಬದಲಿಸಿದ್ದ ‘ವಾಯು’ ಚಂಡಮಾರುತ ಮತ್ತೆ ಗುಜರಾತ್‌ನತ್ತ ಮುಖಮಾಡುವ ಲಕ್ಷಣಗಳು ಕಂಡುಬಂದಿವೆ. ಇದರಿಂದಾಗಿ ಚಂಡಮಾರುತ ಅಪಾಯದಿಂದ ಪಾರಾದ ನಿರಾಳತೆಯಲ್ಲಿದ್ದ ಗುಜರಾತ್‌ ಸರ್ಕಾರಕ್ಕೆ ಆತಂಕ ಶುರುವಾದಂತಾಗಿದೆ.

ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾದ ‘ವಾಯು’ ಚಂಡಮಾರುತ ಗುರುವಾರ ಗುಜರಾತ್‌ ಕರಾವಳಿಗೆ ಅಪ್ಪಳಿಸಬೇಕಿತ್ತು. ಆದರೆ ಬುಧವಾರ ರಾತ್ರಿ ಪಥ ಬದಲಿಸಿ, ಒಮಾನ್‌ನತ್ತ ಮುಖ ಮಾಡಿತ್ತು. ಆದರೆ ಈಗ ಚಂಡಮಾರುತ ಭಾನುವಾರ ಮತ್ತೆ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ. ಜೂ.17ರ ಸೋಮವಾರ- ಜೂ.18ರ ಮಂಗಳವಾರದಂದು ಗುಜರಾತಿನ ಕಛ್‌ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ರಾಜೀವನ್‌ ತಿಳಿಸಿದ್ದಾರೆ.

ಕರಾವಳಿಯಲ್ಲಿ ಭಾರಿ ಮಳೆ : ತುಂಬಿದ ನೇತ್ರಾವತಿಯ ಒಡಲು

ಈ ಕುರಿತು ಗುಜರಾತ್‌ ಸರ್ಕಾರಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಆದರೆ ಗುಜರಾತ್‌ ಕರಾವಳಿಗೆ ಅಪ್ಪಳಿಸುವಷ್ಟರಲ್ಲಿ ಚಂಡಮಾರುತ ತನ್ನ ತೀವ್ರತೆ ಕಳೆದುಕೊಂಡಿರುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಧಾರ್‌ ಲಿಂಕ್‌ ಕಮಾಲ್‌, ಒಂದೇ ವರ್ಷದಲ್ಲಿ 3 ಕೋಟಿ ಫೇಕ್‌ IRCTC ಅಕೌಂಟ್‌ ಬಂದ್‌ ಮಾಡಿದ ಭಾರತೀಯ ರೈಲ್ವೇ!
ಕಾರವಾರ: ಉಂಡ‌ ಮನೆಗೆ ದ್ರೋಹ; ಮನೆ ಕೆಲಸದವನಿಂದಲೇ ಲಕ್ಷಾಂತರ ರೂಪಾಯಿ ಕದ್ದವನ ಬಂಧನ