
ಜೆಮ್ಶೆಡ್ಪುರ[ಫೆ.18]: ತಮ್ಮ ಮೇಲೆ ದಾಳಿ ನಡೆಸಲು ಸಜ್ಜಾಗಿ, ಕೊನೆಗೆ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದ ಮಹಿಳಾ ನಕ್ಸಲ್ಗೆ ಸ್ವತಃ ಸಿಆರ್ಪಿಎಫ್ ಯೋಧರೇ ರಕ್ತದಾನ ಮಾಡಿದ ಮಾನವೀಯ ಘಟನೆ ಇಲ್ಲಿ ನಡೆದಿದೆ.
ಭಾವನೆಗಿಂತ ವೃತ್ತಿಯೇ ಮೇಲು!: ಪಾಕ್ ರಾಯಭಾರಿಗಳಿಗೆ CRPF ಯೋಧರಿಂದಲೇ ರಕ್ಷಣೆ!
ಜೆಮ್ಷೆಡ್ಪುರ ಸಮೀಪದ ಕಾಡಿನಲ್ಲಿ ನಕ್ಸಲ್ ನಾಯಕ ಕಂಡೇ ಹೊನಗಾ ನೇತೃತ್ವದ ತಂಡ ಭದ್ರತಾ ಪಡೆಗಳ ಮೇಲೆ ದಾಳಿಗೆ ಸಂಚು ರೂಪಿಸಿ ಹೊಂಚು ಹಾಕಿ ಕುಳಿತಿತ್ತು. ಈ ಮಾಹಿತಿ ಪಡೆದ ಸಿಆರ್ಪಿಎಫ್ ಅತ್ತ ಕಡೆ ತೆರಳಿದಾಗ, ಉಭಯ ಬಣಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಭದ್ರತಾ ಪಡೆಗಳ ದಾಳಿ ತಪ್ಪಿಸಿಕೊಳ್ಳಲಾಗದೆ 24 ಜನರ ನಕ್ಸಲ್ ತಂಡದಲ್ಲಿದ್ದ ಹಲವರು ಪರಾರಿಯಾದರು.
ಹುತಾತ್ಮ ಅಪ್ಪನ ಚಿತೆಗೆ ಬೆಂಕಿ ಸ್ಪರ್ಶಿಸಿ, ಪ್ರಜ್ಞೆತಪ್ಪಿ ಬಿದ್ದ 10 ವರ್ಷದ ಮಗಳು!
ಈ ವೇಳೆ ಗುಂಡೇಟಿನಿಂದ ಗಾಯಗೊಂಡಿದ್ದ ಮಹಿಳಾ ನಕ್ಸಲ್ ಪರಾರಿಯಾಗಲಾಗದೇ ಅಲ್ಲಿಯೇ ಬಿದ್ದು ಒದ್ದಾಡುತ್ತಿದ್ದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಸಿಆರ್ಫಿಎಫ್ ಯೋಧರು, ಆಕೆಗೆ ಅಗತ್ಯವಾದ ರಕ್ತ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ