
ನವದೆಹಲಿ[ಜೂ. 18] ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ಕಣ್ಣು ಹೊಡೆದಿದ್ದಾರೆ. ಸಂಸತ್ ನಲ್ಲಿ ನೂತನ ಸಂಸದರ ಪ್ರಮಾಣವಚನ ನಡೆಯುತ್ತಿದೆ. ಕಾರ್ಯಕ್ರಮ ಮುಗಿಸಿ ಹೊರಬಂದ ನಂತರ ಅಂದರೆ ಸಂಸತ್ ಭವನದ ಎದುರು ಪೋಟೋಗ್ರಾಫರ್ ಗಳನ್ನು ಕಂಡ ರಾಹುಲ್ ಕಣ್ಣು ಹೊಡೆದಿದ್ದಾರೆ.
ತಮ್ಮ ಕಾಯಂ ಕ್ಷೇತ್ರ ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋತು ಕೇರಳದ ವಯನಾಡ್ ಮೂಲಕ ಸಂಸತ್ ಪ್ರವೇಶ ಮಾಡಿರುವ ಕಾಂಗ್ರೆಸ್ ಅಧ್ಯಕ್ಷರು ಪ್ರಮಾಣ ವಚನ ನಂತರ ರಿಜಿಸ್ಟರ್ ಗೆ ಸಹಿ ಹಾಕಲು ಮರೆತಿದ್ದರು. ನಂತರ ಕೇಂದ್ರ ಸಚಿವರ ಆದಿಯಾಗಿ ಅನೇಕರು ರಾಹುಲ್ ಅವರನ್ನು ಕರೆದು ಸಹಿ ಹಾಕಿಸಿದ್ದರು.
ರಫೇಲ್ ವಿಚಾರದ ಕುರಿತು ಚರ್ಚೆ ನಡೆದಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡು ನಂತರ ರಾಹುಲ್ ಕಣ್ಣು ಹೊಡೆದಿದ್ದು ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.