
ನವದೆಹಲಿ[ಜೂ. 18] ಡಜನ್ ಗೂ ಅಧಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಿದ್ದ ಕೇಂದ್ರ ಸರಕಾರ ಇದೀಗ ಕಂದಾಯ ಇಲಾಖೆಯ 15 ಹಿರಿಯ ಅಧಿಕಾರಿಕಾರಿಗಳನ್ನು ವಜಾ ಮಾಡಿದೆ.
ಲಂಚ ಕೇಳಿದ ಆರೋಪ ಬಂದ ಅಧಿಕಾರಿಗಳನ್ನು ಕೇಂದ್ರ ಸರಕಾರ ವಜಾ ಮಾಡಿದೆ. ಕೇಂದ್ರ ದಹಣಕಾಸು ಇಲಾಖೆ ಮೂಲಗಳು ಹೇಳಿರುವಂತೆ ಕೆಲಸ ಕಳೆದುಕೊಂಡ ಅಧಿಕಾರಿಗಳು ಮುಖ್ಯ ಆಯುಕ್ತ ಮತ್ತು ಆಯುಕ್ತ ಗ್ರೇಡ್ ಅಧಿಕಾರಿಗಳು.
ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರದ ಎರಡನೇ ಪ್ರಮುಖ ಸ್ವಚ್ಛತಾ ಕಾರ್ಯ ಇದಾಗಿದೆ. ದೆಹಲಿ ಅಡಿಟ್ ವಿಭಾಗದ ಪ್ರಿಸಿಪಲ್ ಎಡಿಜಿ ಅನುಪ್ ಶ್ರೀವತ್ಸವ, ಅತುಲ್ ದೀಕ್ಷಿತ್, ಜಿ.ಶ್ರೀಹರ್ಷ, ಮುಂಬೈ ಜಿಎಸ್ ಟಿ ವಿಭಾಗದ ಆಯುಕ್ತ ವಿನೋದ್ ಕೆಆರ್ ಸಂಘ, ಎಸ್ ಎಸ್ .ಬಿಶಿತ್, ಅಮರೇಶ್ ಜೈನ್ ಅವರಿಗೆ ಕಡ್ಡಾಯವಾಗಿ ನಿವೃತ್ತಿ ತೆಗೆದುಕೊಳ್ಳಲು ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.