ಪರಿಷತ್ ನಲ್ಲಿ ರೈತರ ಸಾಲ ಮನ್ನಾ ಮಾಡುವ ಕುರಿತು ಸಿಎಂ ಪ್ರಸ್ತಾಪ

Published : Feb 09, 2017, 11:19 AM ISTUpdated : Apr 11, 2018, 01:05 PM IST
ಪರಿಷತ್ ನಲ್ಲಿ ರೈತರ ಸಾಲ ಮನ್ನಾ ಮಾಡುವ ಕುರಿತು ಸಿಎಂ ಪ್ರಸ್ತಾಪ

ಸಾರಾಂಶ

ಬೆಂಗಳೂರು (ಫೆ.09): ರೈತರಿಗೆ 52 ಸಾವಿರ ಕೋಟಿ ಸಾಲ ಕೊಟ್ಟಿದ್ದೇವೆ. 42 ಸಾವಿರ ಕೋಟಿ ನ್ಯಾಷನಲ್ ಬ್ಯಾಂಕ್ ಸಾಲ ಕೊಟ್ಟಿದೆ. ಸಹಕಾರ ಬ್ಯಾಂಕ್ ಗಳಿಂದ ನಾವು 10 ಸಾವಿರ ಕೋಟಿ ಸಾಲ ನೀಡಿದ್ದೇವೆ. ಹೀಗಾಗಿ ನೀವು ಅರ್ಧ ಸಾಲ ಮನ್ನಾ ಮಾಡಿ ನಾವು ಅರ್ಧ ಸಾಲ ಮನ್ನಾ ಮಾಡುತ್ತೇವೆ ಎಂದು ಪ್ರಧಾನಿಗಳಿಗೆ ಹೇಳಿದ್ದೆ ಆದರೆ ಈವರೆಗೂ ಅದು ಆಗಿಲ್ಲ ಎಂದು ವಿಧಾನಪರಿಷತ್ ನಲ್ಲಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ಫೆ.09): ರೈತರಿಗೆ 52 ಸಾವಿರ ಕೋಟಿ ಸಾಲ ಕೊಟ್ಟಿದ್ದೇವೆ. 42 ಸಾವಿರ ಕೋಟಿ ನ್ಯಾಷನಲ್ ಬ್ಯಾಂಕ್ ಸಾಲ ಕೊಟ್ಟಿದೆ. ಸಹಕಾರ ಬ್ಯಾಂಕ್ ಗಳಿಂದ ನಾವು 10 ಸಾವಿರ ಕೋಟಿ ಸಾಲ ನೀಡಿದ್ದೇವೆ. ಹೀಗಾಗಿ ನೀವು ಅರ್ಧ ಸಾಲ ಮನ್ನಾ ಮಾಡಿ ನಾವು ಅರ್ಧ ಸಾಲ ಮನ್ನಾ ಮಾಡುತ್ತೇವೆ ಎಂದು ಪ್ರಧಾನಿಗಳಿಗೆ ಹೇಳಿದ್ದೆ ಆದರೆ ಈವರೆಗೂ ಅದು ಆಗಿಲ್ಲ ಎಂದು ವಿಧಾನಪರಿಷತ್ ನಲ್ಲಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಹಿಂದೆ ಮನಮೋಹನ್ ಸಿಂಗ್ ಇದ್ದಾಗ ದೇಶದ ರೈತರ 72 ಸಾವಿರ ಕೋಟಿ‌ ರೂ. ಸಾಲ ಮನ್ನಾ ಮಾಡಿದ್ರು. ಕೇಂದ್ರ ಶೇ.80 ರಷ್ಟು ಸಾಲ , ರಾಜ್ಯ ಶೇ.20 ರಷ್ಟು ಸಾಲ ನೀಡಿದೆ. ಈಗ ರಾಜ್ಯ ಸರ್ಕಾರದ ಬಳಿ‌ ಬಂದು ಸಾಲ ‌ಮನ್ನಾ ಮಾಡಿ ಅಂತಿದ್ದಾರೆ. ಬಿಜೆಪಿಯವರೆ ನೀವು ಕೇಂದ್ರ ಸರ್ಕಾರಕ್ಕೆ ಹೇಳಿ ಎಂದ ಸಿ.ಎಂ ಹೇಳಿದ್ದಾರೆ.  

ಬಿಎಸ್ ವೈ ಮೊದಲು ‌ ಸಾಲ ಮನ್ನಾ ಮಾಡಿದ್ದಾಗಲೂ ಕೇವಲ ಶೇ.20 ರಷ್ಟು ರೈತರಿಗೆ ಮಾತ್ರ ಸಹಾಯವಾಗಿತ್ತು. ನಾವು ಶೇ. 100 ರಷ್ಟು ರೈತರಿಗೂ ಸಾಲ ಮನ್ನಾ ಆಗಲಿ ಎನ್ನುವ ಉದ್ದೇಶ ನಮ್ಮದು .ಹೀಗಾಗಿ ಕೇಂದ್ರವೂ ಸಾಲ ಮನ್ನಾ ಮಾಡುವ ಉದಾರತೆ ತೋರಲಿ ಎಂದ ಸಿ.ಎಂ ಸಿದ್ದರಾಮಯ್ಯ ಹೇಳಿದ್ದಾರೆ.

78 ಲಕ್ಷ ರೈತರಲ್ಲಿ ಈಗ ನಾವು 23 ಲಕ್ಷ ರೈತರಿಗೆ ಸಾಲ ನೀಡಿದ್ದೇವೆ. ಆದರೆ 78 ಲಕ್ಷ ರೈತರಿಗೂ ಸಾಲ ನೀಡಬೇಕೆನ್ನುವ ಉದ್ದೇಶ ನಮ್ಮ‌ ಸರ್ಕಾರಕ್ಕಿದೆ . ಪ್ರತಿವರ್ಷ ಶೇ. 10 ರಷ್ಟು ರೈತರಿಗೆ ಸಾಲ ಹೆಚ್ಚಿಸಲಾಗುತ್ತಿದೆ ಎಂದು  ಸದನದಲ್ಲಿ ಸಿ.ಎಂ ಸಿದ್ದರಾಮಯ್ಯ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

8ನೇ ಕ್ಲಾಸ್ ಹುಡುಗಿ ಮೇಲೆ ಬಲತ್ಕಾರ, ಬೆದರಿಸಿ ಚಿನ್ನ ದೋಚಿದ್ದ 10ನೇ ಕ್ಲಾಸ್ ಹುಡುಗ ಅರೆಸ್ಟ್
ಬಿಜೆಪಿ ನಾಯಕನ ಸಂಬಂಧಿ 17ರ ಯುವಕನಿಗೆ ಚೂರಿ ಇರಿದು ಕೊಂದ ದುಷ್ಕರ್ಮಿಗಳು!