
ಬೆಂಗಳೂರು (ಫೆ.09): ನಾಲ್ಕು ಕಾಲುಗಳನ್ನು ಹೊಂದಿದ ಮಗುವಿನ ಶಸ್ತ್ರಚಿಕಿತ್ಸೆಯನ್ನುಆನೇಕಲ್ ನಾರಾಯಣ ಹೆಲ್ತ್ ಸಿಟಿ ವೈದ್ಯರು ನಡೆಸಿದ್ದು, ಆಪರೇಶನ್ ಯಶಸ್ವಿಯಾಗಿದೆ.
ಮಗುವಿನ ಹೆಚ್ಚುವರಿ ಎರಡು ಕಾಲುಗಳನ್ನ ಶಸ್ತ್ರ ಚಿಕಿತ್ಸೆಯಿಂದ ಬೇರ್ಪಡಿಸಿದ್ದು ಆಪರೇಷನ್ ಬಳಿಕ ಸಾಮಾನ್ಯ ಮಗುವಂತೆ ಆಗಿದ್ದು, ಆರೋಗ್ಯವಾಗಿದೆ ಎಂದು ಬಗ್ಗೆ ನಾರಾಯಣ ಹೆಲ್ತ್ ಸಿಟಿ ವೈದ್ಯರು ಸುದ್ದಿಗೊಷ್ಟಿಯಲ್ಲಿ ಹೇಳಿದ್ದಾರೆ.
ರಾಯಚೂರಿನ ಲಲಿತಾ ಹಾಗೂ ಚನ್ನಬಸವ ಎಂಬುವವರ ಒಂದು ತಿಂಗಳ ಮಗುವನ್ನು ಜನವರಿ 24 ರಂದು ಆಸ್ಪತ್ರೆಗೆ ದಾಖಲಾಗಿತ್ತು. ನಾರಾಯಣ ಹೆಲ್ತ್ ಸಿಟಿ ವೈದ್ಯರು ಮಗುವಿಗೆ ಉಚಿತ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಮಗುವಿನ ಪೋಷಕರು ವೈದ್ಯರಿಗೆ ಧನ್ಯವಾದಗಳನ್ನು ತಿಳಿಸಿದ್ದು, ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.
.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.